Advertisement

ವಿಮಾನ ದುರಂತದಲ್ಲೇ ನೇತಾಜಿ ಸಾವು: ಕೇಂದ್ರ

02:12 AM Jun 01, 2017 | Karthik A |

ಹೊಸದಿಲ್ಲಿ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಮೃತಪಟ್ಟಿದ್ದು ಹೇಗೆ? 1945ರ ಆಗಸ್ಟ್‌ 18ರಂದು ನಡೆದ ವಿಮಾನ ದುರಂತದಲ್ಲಿ. ಹೌದು. ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರಕಾರವೇ ಈ ಉತ್ತರ ನೀಡಿದೆ. ನೇತಾಜಿ ಅವರ ಸಾವಿಗೆ ಸಂಬಂಧಿಸಿ ವಿವಿಧ ಸಮಿತಿಗಳು ನೀಡಿರುವ ವರದಿಗಳನ್ನು ಪರಿಗಣಿಸಿ, ಅವರು ವಿಮಾನ ದುರಂತದಲ್ಲೇ ಮೃತಪಟ್ಟಿದ್ದು ಹೌದು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆದರೆ, ಸರಕಾರದ ಈ ಪ್ರತಿ ಕ್ರಿಯೆ ಬಗ್ಗೆ ನೇತಾಜಿ ಕುಟುಂಬ ಸದಸ್ಯರು ಕಿಡಿಕಾರಿದ್ದಾರೆ. ‘ಇದು ಸರಕಾರದ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಪ್ರಕರಣವು ಇನ್ನೂ ಇತ್ಯರ್ಥಗೊಂಡಿರದೇ ಇರುವಾಗ ಇಂತಹುದೊಂದು ಉತ್ತರವನ್ನು ಸರಕಾರ ಹೇಗೆ ನೀಡಲು ಸಾಧ್ಯ’ ಎಂದು ನೇತಾಜಿ ಅವರ ಸಂಬಂಧಿ, ಬಿಜೆಪಿ ನಾಯಕ ಚಂದ್ರಕುಮಾರ್‌ ಬೋಸ್‌ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next