Advertisement

ಮೈಸೂರು: ಅಪರಿಚಿತ ವ್ಯಕ್ತಿಯ ಕೊಲೆ ಶಂಕೆ! ಸ್ಥಳದಲ್ಲಿತ್ತು 10ಕ್ಕೂ ಹೆಚ್ಚು ಗುರುತಿನ ಚೀಟಿಗಳು

12:47 PM Sep 30, 2020 | sudhir |

ಮೈಸೂರು : ಮೈಸೂರು: ನಗರದ ಮೆಟ್ರೋಪೋಲ್ ವೃತ್ತದ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ.

Advertisement

ಮೃತ ಅಪರಿಚಿತ ವ್ಯಕ್ತಿ ಮಾನಸಿಕ ಅಸ್ವಸ್ಥ ಹಾಗೂ ಭಿಕ್ಷುಕ ಇರಬಹುದು ಎನ್ನಲಾಗಿದೆ. ಮೆಟ್ರೊಪೋಲ್ ಬಸ್ ನಿಲ್ದಾಣದ ಬಳಿ ರಕ್ತದ ಮಡುವಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಮೃತ ವ್ಯಕ್ತಿಯ ದೇಹದ ಬಳಿ ಹತ್ತಕ್ಕೂ ಹೆಚ್ಚು ಜನರ ವಿವಿಧ ಗುರುತಿನ ಚೀಟಿಗಳು (ಬೇರೆಯವರ ಆಧಾರ್‌, ಮತದಾನ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್) ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಇಷ್ಟೊಂದು ಗುರುತಿನ ಚೀಟಿಗಳು ಈತನ ಕಿಸೆಯೊಳಗೆ ಹೇಗೆ ಬಂದಿದೆ ಎಂಬುದೇ ವಿಚಿತ್ರ, ಎಲ್ಲದಕ್ಕೂ ತನಿಖೆ ಬಳಿಕವೇ ಉತ್ತರ ಸಿಗಬೇಕಾಗಿದೆ.

ಇದನ್ನೂ ಓದಿ:ಬಾಬ್ರಿ ಅಂತಿಮ ತೀರ್ಪಿನಲ್ಲೇನಿದೆ?: ರಿಲೀಫ್-ಆಡ್ವಾಣಿ ಸೇರಿ ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next