Advertisement

ಮಂಗಳೂರಿಗೆ  ಮ್ಯಾನ್ಮಾರ್‌ನ ಕಳಪೆ ಅಡಿಕೆ

12:30 AM Feb 14, 2019 | Team Udayavani |

ಮಂಗಳೂರು: ತೆರಿಗೆ ತಪ್ಪಿಸಿ ಕಳ್ಳಹಾದಿಯಲ್ಲಿ ಅಡಿಕೆ ಆಮದು ಮುಂದುವರಿದಿದ್ದು, ಕಳಪೆ ಗುಣ ಮಟ್ಟದ ಮ್ಯಾನ್ಮಾರ್‌ (ಮೊದಲಿನ ಬರ್ಮಾ) ಅಡಿಕೆ ಇದೀಗ ಮಂಗಳೂರು ಮಾರುಕಟ್ಟೆಗೂ ನುಸುಳಿದೆ.

Advertisement

ಮಾರುಕಟ್ಟೆ ಮೇಲೆ ಋಣಾತ್ಮಕ ಪರಿಣಾಮ ಬೀರಬಲ್ಲ ಈ ವಂಚನೆಯ ವ್ಯವಹಾರವನ್ನು ತಡೆಯುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೇತೃತ್ವದ ಕ್ಯಾಂಪ್ಕೊ ನಿಯೋಗ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ವಾಣಿಜ್ಯ ಸಚಿವ ಸುರೇಶ್‌ ಪ್ರಭು ಮತ್ತು ಹಣಕಾಸು ಸಚಿವ ಪಿಯೂಷ್‌ ಗೋಯೆಲ್‌ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ, ರಾಘವೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ, ಕ್ರಾಂಪ್ಸ್‌ನ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ, ಮ್ಯಾಮೊRàಸ್‌ 
ಉಪಾಧ್ಯಕ್ಷ ವೈ. ಸುಬ್ರಹ್ಮಣ್ಯ, ತುಮೊRàಸ್‌ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಹಾಗೂ ಟಿಎಸ್‌ಎಸ್‌ನ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಹೆಗ್ಡೆ ಮೊದಲಾದವರಿದ್ದರು.ಕಟ್ಟುನಿಟ್ಟಿನ ಕ್ರಮದಿಂದ ಬೆಳೆಗಾರರ ಹಿತರಕ್ಷಣೆಯಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next