Advertisement

‘ಬಿಎಸ್‌ಎನ್‌ಎಲ್‌ ಅಗ್ರ ಕಂಪೆನಿಯಾಗಿಸುವುದೇ ನಮ್ಮ ಗುರಿ’

10:18 AM Jan 11, 2020 | Hari Prasad |

ಚೆನ್ನೈ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾಗಿಸುವುದೇ ಕೇಂದ್ರ ಸರ್ಕಾರದ ಗುರಿ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

Advertisement

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಚೆನ್ನೈ ನಡುವೆ ಸಾಗರದಾಳದಲ್ಲಿ ಆಪ್ಟಿಕಲ್‌ ಫೈಬರ್‌ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಿಎಸ್‌ಎನ್‌ಎಲ್‌ ನಮ್ಮ ಸರಕಾರದ ಆಸ್ತಿ. ಅದನ್ನು ನಷ್ಟದಿಂದ ಮೇಲೆತ್ತಿ, ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾ ಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ’ ಎಂದರು.

‘ಬಿಎಸ್‌ಎನ್‌ಎಲ್‌ ಕೇವಲ ಮೊಬೈಲ್‌ ಅಥವಾ ಟೆಲಿಫೋನ್‌ ಸೇವೆ ನೀಡುವ ಕಂಪೆನಿಯಲ್ಲ. ವಿವಿಧ ಯೋಜನೆಗಳಲ್ಲಿ, ಕಾರ್ಯಾಚರಣೆಗಳಲ್ಲಿ ಸರಕಾರ ಅಳವಡಿಸಿಕೊಳ್ಳುವ ತಂತ್ರಗಾರಿಕೆಯ ಬೆನ್ನೆಲುಬು.

ಒಡಿಶಾ ಹಾಗೂ ದೇಶದ ಇತರೆಡೆ ಪ್ರವಾಹ ಪರಿಸ್ಥಿತಿ ಏರ್ಪಟ್ಟಾಗ, ಜನರ ರಕ್ಷಣೆಗೆ ಅಲ್ಲಿ ಹೋಗಿದ್ದ ಸೇನಾ ತುಕಡಿಗಳ ನಡುವಿನ ಸಂಪರ್ಕ ಸಾಧನವಾಗಿದ್ದೇ ಬಿಎಸ್‌ಎನ್‌ಎಲ್‌ನ ಸೇವೆ. ಈಗ, ಚೆನ್ನೈ-ಲಕ್ಷದ್ವೀಪದ ನಡುವೆ ಸಮುದ್ರದಾಳದಲ್ಲಿ 1,224 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುವ ಆಪ್ಟಿಕಪ್‌ ಫೈಬರ್‌ ಕೇಬಲ್‌ ಯೋಜನೆಯ ಹೊಣೆಯನ್ನೂ ಬಿಎಸ್‌ಎನ್‌ಎಲ್‌ ಹೊತ್ತಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next