Advertisement

9 ಮಕ್ಕಳ ಸಾವಿಗೆ ಕಾರಣನಾದ ಬಿಜೆಪಿ ನಾಯಕ ಬೈತಾ ಪೊಲೀಸರಿಗೆ ಶರಣು

11:14 AM Feb 28, 2018 | Team Udayavani |

ಪಟ್ನಾ : 9 ಮಕ್ಕಳ ಮೇಲೆ ಕಾರನ್ನು ಓಡಿಸಿ ಅವರ ದಾರುಣ ಸಾವಿಗೆ ಕಾರಣನಾದ “ಮುಜಫ‌ರಪುರ ಹಿಟ್‌ ಆ್ಯಂಡ್‌ ರನ್‌’ ಕೇಸಿನ ಆರೋಪಿ,  ಬಿಹಾರದ ಬಿಜೆಪಿ ನಾಯಕ ಮನೋಜ್‌ ಬೈತಾ ಪೊಲೀಸರಿಗೆ ಶರಣಾಗಿದ್ದಾನೆ.

Advertisement

ಕುಡಿದ ನಶೆಯಲ್ಲಿ ತಾನೇ ನಿರ್ಲಕ್ಷ್ಯದಿಂದ ಎಸಗಿದ ಅಪಘಾತದಲ್ಲಿ ಗಾಯಾಳುವಾಗಿರುವ ಬೈತಾನನ್ನು ಮುಜಫ‌ರಪುರದ ಶ್ರೀ ಕೃಷ್ಣ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಿಂದ ಪಟ್ನಾ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. 

ಕಳೆದ ಶನಿವಾರ ಮಧ್ಯಾಹ್ನ ಬೈತಾ ಎಸಗಿದ್ದ ಅವಘಡದಲ್ಲಿ ಮೃತಪಟ್ಟಿದ್ದ 9 ಮಕ್ಕಳು 8ರಿಂದ 10 ವರ್ಷದೊಳಗಿನವರಾಗಿದ್ದಾರೆ. 

ಸೀತಾಮಡಿ ಜಿಲ್ಲೆಯ ಬಿಜೆಪಿ ನಾಯಕನಾಗಿರುವ ಬೈತಾನನು ಬಿಜೆಪಿ ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next