Advertisement

ರಾಜನ್‌ ನಾಗೇಂದ್ರ ಸಂಗೀತ ಸಂಜೆ!

04:21 PM Feb 03, 2018 | |

“ಆ ಮೊಗವು ಎಂಥಾ ಚೆಲುವು’, “ಹಳ್ಳಿಯಾದರೇನು ಶಿವಾ ದಿಲ್ಲಿಯಾದರೇನು ಶಿವಾ’ ಮುಂತಾದ ಮನ ಮಿಡಿಯುವ ಗೀತೆಗಳನ್ನು ಕನ್ನಡ ಶ್ರೋತೃಗಳಿಗೆ ಕೊಟ್ಟ ಸಂಗೀತ ನಿರ್ದೇಶಕದ್ವಯರು ರಾಜನ್‌- ನಾಗೇಂದ್ರ. ನಗರದಲ್ಲಿ ಅವರದ್ದೇ “ರಾಜನ್‌ ನಾಗೇಂದ್ರ ಫಿಲಂ ಹಿಟ್ಸ್‌’ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ. ರಾಜನ್‌ ನಾಗೇಂದ್ರ ಟ್ರಸ್ಟ್‌ ಮತ್ತು ಸಪ್ತ ಸ್ವರಾಂಜಲಿ ಸಂಗೀತ ಶಾಲೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

Advertisement

ರಾಜನ್‌ ಅವರ ನೇತೃತ್ವದಲ್ಲಿ ತಾಲೀಮು ನಡೆಸಿರುವ ಬದರಿಪ್ರಸಾದ್‌, ಸ್ಮಿತಾ ಕಾರ್ತಿಕ್‌, ಶ್ವೇತಾ ಪ್ರಭು, ಕೀರ್ತನಾ, ಧರ್ಮರಾಜ್‌, ಸಹನಾ ಹೆಗಡೆ, ಚಂದ್ರಶೇಖರ್‌ ಮತ್ತು ಶ್ರೀನಿವಾಸ್‌ ಅವರು ಅಂದು ರಾಜನ್‌ ನಾಗೇಂದ್ರ ಅವರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಾಸಗೀತೆಗಳನ್ನೂ ಗಾಯಕರು ಹಾಡಲಿದ್ದಾರೆ. ರಾಜನ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಎಲ್ಲಿ?: ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ
ಯಾವಾಗ?: ಫೆ. 3, ಸಂಜೆ 5

Advertisement

Udayavani is now on Telegram. Click here to join our channel and stay updated with the latest news.

Next