Advertisement

ನಾದೋಪಾಸನ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ

11:50 AM Jun 05, 2018 | |

ಬೆಂಗಳೂರು: ನಗರದ ಅನಂದರಾವ್‌ ವೃತ್ತದ ಬಳಿಯಿರುವ ಕೆಇಬಿ ಎಂಜಿನಿಯರ್ ಅಸೋಸಿಯೇಷನ್‌ನಲ್ಲಿ ಭಾನುವಾರ ನಾದೋಪಾಸನ ಸಂಗೀತ ಸಂಸ್ಥೆಯಿಂದ ವೃದ್ಧರು, ಅಂಧರು, ಅನಾಥರು ಹಾಗೂ ವಿಕಲಚೇತನರ ಸಹಾಯಾರ್ಥ ಮುಖ್ಯ ಇಂಜಿನಿಯರ್‌ ಡಿ. ಉದಯಶಂಕರ್‌ ಹಾಗೂ ಅವರ ತಂಡದಿಂದ “ಒಳಿತು ಮಾಡು ಮನುಜ’ ಶೀರ್ಷಿಕೆಯಡಿ ಸಂಗೀತ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮವನ್ನು ವಿಕಲಚೇತನರು, ವೃದ್ಧರು, ಅಂಧರು, ಅನಾಥರು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಅಪಾರ ಸಂಖ್ಯೆಯ ಪ್ರೇಕ್ಷಕರು ನೆರೆದಿದ್ದ ಕಾರ್ಯಕ್ರಮದಲ್ಲಿ ಗಾಯಕ ಡಿ. ಉದಯಶಂಕರ್‌ ಅವರಿಗೆ ಕೆ. ಮೋಹನ್‌, ಸಿ.ಆರ್‌. ಮಹೇಶ್‌ ಕುಮಾರ್‌, ಗುರುರಾಜ್‌ ಅಳ್ಳಗಿ, ಅರ್‌.ವಿಶ್ವನಾಥ್‌, ಎಂ.ಜಿ.ರಮಾದೇವಿ, ಡಿ.ಜ್ಯೋತಿ, ಎ.ವರ್ಷಾ ಪ್ರಭು ಹಾಗೂ ಜಿ.ಬಿ.ಜೈತ್ರ ಸಾಥ್‌ ನೀಡಿದರು.

ಚಲನಚಿತ್ರ ನಿರ್ದೇಶಕ ರಘುವರ್ಧನ್‌ ರಚಿಸಿ, ನಿರ್ದೇಶಿಸಿದ ಶೀರ್ಷಿಕೆ ಗೀತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಎಂಜಿನಿಯರುಗಳು ಭಾವಗೀತೆ, ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಲಹರಿ ಹರಿಸಿದರು. ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಸಹಸ್ರಾರು ಸಂಗೀತ ಪ್ರಿಯರು ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next