Advertisement

ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ: ಹೊರರಾಜ್ಯದಿಂದ ತನಿಖೆ ಆಗಲಿ: ಲೆಹರ್‌ಸಿಂಗ್‌

10:58 PM Aug 29, 2022 | Team Udayavani |

ಬೆಂಗಳೂರು: ಮುರುಘಾ ಮಠದ ಶ್ರೀಗಳ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯನ್ನು ಹೊರ ರಾಜ್ಯದಿಂದ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಸಿರೋಯಾ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಹಳ ಪ್ರಭಾವಿ ಸ್ವಾಮಿಗಳ ಮೇಲೆ ದೂರು ದಾಖಲಾಗಿದೆ. ಅಪ್ರಾಪ್ತ ವಯಸ್ಕ ಬಾಲಕಿಯರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಇದೊಂದು ಅತ್ಯಂತ ದುಃಖಕರ ಬೆಳವಣಿಗೆ. ಪ್ರತಿ ಸಲ ಇಂತಹ ಪ್ರಕರಣಗಳು ಆದಾಗ, ಜನರ ಮನಸ್ಸು ಕಲುಷಿತ ಆಗುತ್ತದೆ.

ಜವಾಬ್ದಾರಿಯಿರುವ ಸ್ಥಾನದಲ್ಲಿ ಈ ಪ್ರಕರಣ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಇದರಲ್ಲಿ ರಾಜ್ಯ ಸರಕಾರದ ಯಾವುದೇ ಕೈವಾಡ ಇಲ್ಲವೆಂದು ಸಾಬೀತುಪಡಿಸಬೇಕು. ಬಾಲಕಿಯರಿಗೆ ನ್ಯಾಯ ಸಿಗಬೇಕು ಅಂದರೆ, ಬೇರೆಡೆಗೆ ಪ್ರಕರಣ ವರ್ಗಾವಣೆ ಆಗಬೇಕು. ಇನ್ನೂ ಏನಾದರೂ ಗೊಂದಲವಿದ್ದಲ್ಲಿ ಇಂತಹ ಪ್ರಕರಣಗಳು ಹೊರ ರಾಜ್ಯದಿಂದ ತನಿಖೆಯಾಗುವುದು ಸೂಕ್ತ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next