Advertisement

ಸಾಸ್ತಾನದ ಬಸ್ಸುನಿಲ್ದಾಣ ಬಳಿ ಕೊಲೆಯಾದ ಸ್ಥಿತಿಯಲ್ಲಿ ಶವಪತ್ತೆ

11:01 AM Dec 27, 2018 | Team Udayavani |

ಸಾಸ್ತಾನ: ಎಲೆಕ್ಟ್ರಿಷನ್ ಕೆಲಸ ಮಾಡುತ್ತಿದ್ದ ಯುವಕನೋರ್ವನ ಶವ ಬಸ್ ನಿಲ್ದಾಣ ಬಳಿಯ ಖಾಲಿ ಕಟ್ಟಡದಲ್ಲಿ ಗುರುವಾರ  ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಮೃತಪಟ್ಟ ಯುವಕ ಮಾಬುಕಳ ನಿವಾಸಿ  ಹರೀಶ್ ಕುಂದರ್ (28)  ಎಂದು ಗುರುತಿಸಲಾಗಿದೆ. 

Advertisement

ಬುಧವಾರ ರಾತ್ರಿ ಸಾಸ್ತಾನದಲ್ಲಿ ಯಕ್ಷಗಾನವಿದ್ದು ಹರೀಶ್ ಅದಕ್ಕೆ ವಿದ್ಯುತ್ ಅಲಂಕಾರ ಮಾಡಿದ್ದರು. ಬೆಳಗಿನ ಜಾವ ಸ್ಥಳೀಯರು ಶವವನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಿವಿ, ಕಾಲಿನಲ್ಲಿ ರಕ್ತ ಸೋರುತ್ತಿದ್ದು, ಕೊಲೆ ಅನುಮಾನ ವ್ಯಕ್ತವಾಗಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. 


ಮೃತ  ಹರೀಶ್ ಕುಂದರ್ ಸಭ್ಯ ಯುವಕನಾಗಿ  ಊರಿನಲ್ಲಿ ಉತ್ತಮ ಅಭಿಪ್ರಾಯ ಹೊಂದಿದ್ದರು. ಮೃತರು ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next