Advertisement

ರಾಜ್ಯಕ್ಕೆ ಮುರಳೀಧರ ರಾವ್‌ ಉಸ್ತುವಾರಿ

12:30 AM Jan 06, 2019 | Team Udayavani |

ಹೊಸದಿಲ್ಲಿ: ಕರ್ನಾಟಕ ಸಹಿತ 9 ರಾಜ್ಯಗಳಿಗೆ ಉಸ್ತುವಾರಿಗಳನ್ನು ಬಿಜೆಪಿ ಶನಿವಾರ ನೇಮಕ ಮಾಡಿದೆ. ಮುರಳೀಧರ ರಾವ್‌ ಹಾಗೂ ಕಿರಣ್‌ ಮಹೇಶ್ವರಿ ಕರ್ನಾಟಕದ ಉಸ್ತುವಾರಿ ವಹಿಸಲಿದ್ದಾರೆ. ಅಲ್ಲದೆ, ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್‌, ನಿಕೋಬಾರ್‌ಗೆ ಪಿಯೂಶ್‌ ಗೋಯೆಲ್‌ ಹಾಗೂ ಸಿ.ಟಿ. ರವಿ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಉತ್ತರ ಪ್ರದೇಶಕ್ಕೆ ಜೆ.ಪಿ ನಡ್ಡಾ, ದಿಲ್ಲಿಗೆ ಸಚಿವೆ ನಿರ್ಮಲಾ ಸೀತಾರಾಮನ್‌, ಹರ್ಯಾಣಕ್ಕೆ ಕಲರಾಜ್‌ ಮಿಶ್ರಾ ಹಾಗೂ ವಿಶ್ವಾಸ್‌ ಸಾರಂಗ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ತ್ರಿಪುರಾಗೆ ಅವಿನಾಶ್‌ ರಾಯ್‌ ಖನ್ನಾ ಉಸ್ತುವಾರಿಗಳಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next