Advertisement

ಮನೆ ಬಾಗಿಲಿಗೆ ಪಾಲಿಕೆ ನಾಳೆ ಚಾಲನೆ

06:51 PM Nov 24, 2020 | Suhan S |

ದಾವಣಗೆರೆ: ರಾಜ್ಯದಲ್ಲಿ ಪ್ರಥಮ ಬಾರಿಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ “ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನ.25ರಂದು ಚಾಲನೆ ನೀಡಲಾಗುವುದು ಎಂದು ಪಾಲಿಕೆಮಹಾಪೌರ ಬಿ.ಜಿ. ಅಜಯಕುಮಾರ್‌ ತಿಳಿಸಿದರು.

Advertisement

ಅವರು ಸೋಮವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ನೂತನ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು. ನಾವು ರೂಪಿಸಿದಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆತಲುಪಿಸುವುದು ಈ ಕಾರ್ಯಕ್ರಮದ ಗುರಿಯಾಗಿದ್ದು ನಗರದ ಎಲ್ಲ 45 ವಾರ್ಡ್‌ಗಳಲ್ಲಿಯೂ ನಿಗದಿಪಡಿಸಿದದಿನಾಂಕದಂದು ಮೂಲಭೂತ ಹಕ್ಕು ಹಾಗೂಸೌಲಭ್ಯಗಳನ್ನು ಸಾರ್ವಜನಿಕರ ಮನೆ ಬಾಗಿಲಲ್ಲಿಯೇ ಪಡೆಯಬಹುದಾಗಿದೆ ಎಂದರು.

ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಖಾತೆ ಬದಲಾವಣೆ, ಜನನ ಹಾಗೂ ಮರಣ ಪ್ರಮಾಣಪತ್ರ, ಮನೆ ಕಂದಾಯ, ನೀರಿನ ಕಂದಾಯ, ಖಾತೆನೋಂದಣಿ ಹಾಗೂ ಬೀದಿದೀಪ ಸೇವೆ ಸೇರಿದಂತೆ ಪಾಲಿಕೆಯಿಂದ ಸಾರ್ವಜನಿಕರಿಗೆ ದೊರಕುವ ಎಲ್ಲ ಸೇವೆ, ಸೌಲಭ್ಯಗಳನ್ನು ಮನೆ ಬಾಗಿಲಲ್ಲಿಯೇ ನೀಡಲಾಗುವುದು. ಇದಕ್ಕಾಗಿ ಒಂದು ವಾರಮುಂಚೆಯೇ ಪಾಲಿಕೆ ವಾರ್ಡಿಗೆ ಬರುವ ಸ್ಥಳ,ದಿನಾಂಕ ನಿಗದಿಪಡಿಸಿ ಈ ಬಗ್ಗೆ ವಾರ್ಡಿನಾದ್ಯಂತ ಕರಪತ್ರ, ಧ್ವನಿವರ್ಧಕದ ಮೂಲಕ ಪ್ರಚಾರಮಾಡಲಾಗುವುದು. ನಿಗದಿತ ದಿನಾಂಕದಂದು ಬೆಳಿಗ್ಗೆ10ಗಂಟೆಯಿಂದ ಸಂಜೆ 5ಗಂಟೆವರೆಗೆ ಪಾಲಿಕೆಯಎಲ್ಲ ವಿಭಾಗದ ಅಧಿಕಾರಿ, ನೌಕರರು, ಸಿಬ್ಬಂದಿ ಗಣಕಯಂತ್ರ ಸೇರಿದಂತೆ ಎಲ್ಲ ಕಚೇರಿ ಅಗತ್ಯವಸ್ತುಗಳೊಂದಿಗೆ ಸ್ಥಳದಲ್ಲಿದ್ದು ವಿವಿಧ ಕೌಂಟರ್‌ ಗಳನ್ನು ತೆರೆದು ಸೇವೆ ನೀಡುವರು. ಇದೇಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆ, ಬೇಡಿಕೆಗಳನ್ನು ಆಲಿಸಿ ಸ್ಥಳದಲ್ಲಿಯೇ ಕ್ರಮವಹಿಸಲಾಗುವುದು. ವಾರದಲ್ಲಿ ಮೂರು ವಾರ್ಡ್‌ಗಳಲ್ಲಿ ಮನೆ ಬಾಗಿಲಿಗೆಮಹಾನಗರ ಪಾಲಿಕೆ ಕಾರ್ಯಕ್ರಮಮಾಡಲಾಗುವುದು. ಕ್ರಮವಾಗಿ ಎಲ್ಲ ವಾರ್ಡ್‌ಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಲಕ್ಷ ಸಸಿ ನೆಡಲು ಚಾಲನೆ: ಇದೇ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಚಾಲನೆ ನೀಡುವರು. ಈಗ ಬೇಸಿಗೆ ಇರುವುದರಿಂದಈ ಯೋಜನೆಯಡಿ ಪ್ರತಿ ವಾರ್ಡ್‌ನಲ್ಲಿ ಕೇವಲ100 ಸಸಿಗಳನ್ನು ನೆಡಲಾಗುವುದು. ಜೂನ್‌ ವೇಳೆಗೆಪ್ರತಿ ವಾರ್ಡ್‌ನಲ್ಲಿ ಎರಡು ಸಾವಿರ ಸಸಿಗಳನ್ನುನೆಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಪ್ರತಿ ವಾರ್ಡ್‌ನಲ್ಲಿಪೌರಕಾರ್ಮಿಕರಿಂದ ಗುಂಪು ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಮಹಾನಗರವನ್ನು ಮೈಸೂರು ಮಾದರಿಯಲ್ಲಿ ಸ್ವತ್ಛನಗರವನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.ಒಟ್ಟಾರೆ ಮಹಾನಗರವನ್ನು ಸ್ವತ್ಛನಗರ, ಹಸಿರು ನಗರ ಹಾಗೂ ಬೆಳಕಿನ ನಗರವನ್ನಾಗಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಹಾಪೌರರು ತಿಳಿಸಿದರು.

Advertisement

ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್‌, ಎಸ್‌.ಟಿ. ವಿರೇಶ್‌, ಪಿ.ಎಸ್‌. ಬಸವರಾಜ್‌ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು

45 ಕೋಟಿ ರೂ. ಅನುದಾನ ನಿರೀಕ್ಷೆ :  ಇತ್ತೀಚೆಗೆ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಮುಖ್ಯಮಂತ್ರಿಯವರನ್ನುಭೇಟಿಯಾಗಿ ಮನೆಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮ ಸಂದರ್ಭದಲ್ಲಿಪ್ರತಿ ವಾರ್ಡಿನ ಅಭಿವೃದ್ಧಿಗೆ ತಲಾ ಒಂದು ಕೋಟಿಯಂತೆ 45 ಕೋಟಿ ರೂ.ಅನುದಾನ ಕೇಳಲಾಗಿದೆ. ಈ ಬಗ್ಗೆ ಜಿಲ್ಲಾಉಸ್ತುವಾರಿ ಸಚಿವ ಭೈರತಿ ಬಸವರಾಜ್‌ಸಹ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ. ಅನುದಾನ ಬರುವ ನಿರೀಕ್ಷೆ ಇದೆ ಎಂದು ಬಿ.ಜಿ. ಅಜಯ್‌ ಕುಮಾರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ಸಚಿವರಿಂದ ಉದ್ಘಾಟನೆ :  ನ. 25ರಂದು ಬೆಳಿಗ್ಗೆ 9ಗಂಟೆಗೆ ಒಂದನೇವಾರ್ಡಿನ ಗಾಂಧಿನಗರದ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ನೂತನಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ. ರವೀದ್ರನಾಥ್‌, ಶಾಮನೂರು ಶಿವಶಂಕರಪ್ಪ, ಪಾಲಿಕೆಯ ಎಲ್ಲ ಸ್ಥಾಯಿ ಸಮಿತಿ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next