Advertisement

ರಸ್ತೆ ಸಮಸ್ಯೆ ಶಾಸಕರ ಕರೆಗೆ ಕೂಡಲೇ ಸ್ಪಂದಿಸಿದ  ಪುರಸಭೆ

02:20 AM Jul 19, 2017 | Harsha Rao |

ಮೂಡಬಿದಿರೆ: ಸ್ವರಾಜ್ಯ ಮೈದಾನವನ್ನು ಆವರಿಸಿಕೊಂಡ ರಸ್ತೆ ಹೊಂಡ ಗುಂಡಿಗಳಿಂದ ತುಂಬಿರುವುದನ್ನು ಶಾಸಕರ ಸಮ್ಮುಖವೇ ಪುರಸಭಾ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ತಿಂಗಳುಗಳೇ ಸರಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ಈಗ ಶಾಸಕರ ಸೂಚನೆ ಮೇರೆಗೆ ಕೇವಲ ಒಂದು ಗಂಟೆಯ ಒಳಗೆ ದಿಢೀರ್‌ ಆಗಿ ಈ ರಸ್ತೆಯ ಹೊಂಡ ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.

Advertisement

ಪದೇ ಪದೇ ಪುರಸಭೆಯವರಲ್ಲಿ  ಪತ್ರಕರ್ತರು ಈ ರಸ್ತೆಯ  ಬಗ್ಗೆ ಪ್ರಶ್ನಿಸಿ ಸುಸ್ತಾಗಿದ್ದರು. ಶಾಸಕರು ಒಂದು ಕೋಟಿ ರೂ. ಮಂಜೂರು ಮಾಡಿದ್ದರೂ ಮಳೆಗಾಲವಾದ ಕಾರಣ ಕೆಲಸ ಆರಂಭಿಸಿಲ್ಲ ಎಂಬ ಮಾತು ತೇಲಿ ಬಂದಿದ್ದವು.  
ಮಂಗಳವಾರ ಶಾಸಕ ಅಭಯಚಂದ್ರ ಅವರಲ್ಲಿ “ಉದಯವಾಣಿ’ ಪ್ರತಿನಿಧಿ ಈ ಬಗ್ಗೆ ಗಮನ ಸೆಳೆದು, ಕೋಟಿ ರೂ. ಕಾಮಗಾರಿ ನಡೆಯುವ ಮುನ್ನ  ಜನರು ಹಾಗೂ ವಾಹನಗಳ ಓಡಾಟಕ್ಕೆ  ಅನುಕೂಲವಾಗುವಂತೆ  ಹೊಂಡ ಮುಚ್ಚಿಸಲು ವಿನಂತಿಸಿದರು.

ತತ್‌ಕ್ಷಣ ಶಾಸಕರು ಪುರಸಭಾ ಎಂಜಿನಿಯರ್‌ ದಿನೇಶ್‌ ಅವರಿಗೆ  ಕರೆ ಮಾಡಿದರು. ಗಂಟೆ ಕಳೆದು ನೋಡುವಾಗ  ಹೊಂಡ ಗುಂಡಿಗಳನ್ನೆಲ್ಲ  ತಕ್ಕಮಟ್ಟಿಗೆ ಮುಚ್ಚಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next