Advertisement

ಹೃದಯಾಘಾತದಿಂದ ನ್ಯಾಯಾಲಯ ಆವರಣದಲ್ಲೇ ನಗರಸಭಾ ಸದಸ್ಯ ಸಾವು

01:39 PM Sep 01, 2021 | Team Udayavani |

ಚಾಮರಾಜನಗರ: ನಗರಸಭಾ ಸದಸ್ಯರೊಬ್ಬರು ನ್ಯಾಯಾಲಯದ ಆವರಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.

Advertisement

ನಗರದ ಗಾಳಿಪುರ ಬಡಾವಣೆಯ ಅಹಮದ್ ನಗರ ಮೊಹಲ್ಲ ನಿವಾಸಿ, 6ನೇ ವಾರ್ಡ್ ಸದಸ್ಯ, ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಖಾನ್ (48) ಮೃತರು.

ಮೃತರು ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಕರಣವೊಂದರ ಸಲುವಾಗಿ ನಗರದ ನ್ಯಾಯಾಲಯಕ್ಕೆ ಸಮೀವುಲ್ಲಾ ಖಾನ್ ಹಾಜರಾಗಿದ್ದರು. ಕಲಾಪ ಆರಂಭವಾಗುವ ಮುನ್ನ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ಅವರು ಇದ್ದಕ್ಕಿದ್ದಂತೆ ತೀವ್ರ ಎದೆನೋವು ಎಂದು ಹೇಳಿ ಕುಸಿದು ಬಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ನಂತರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಮೀವುಲ್ಲಾ ಅವರಿಗೆ ಹೃದ್ರೋಗವಿದ್ದು ನಾಲ್ಕು ವರ್ಷಗಳ ಹಿಂದೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು ಎಂದು ಎಸ್ ಡಿ ಪಿ ಐ ಮುಖಂಡ ಆರೀಫ್ ತಿಳಿಸಿದರು.

Advertisement

ಸಮೀವುಲ್ಲಾ ಖಾನ್ ಅವರು ನಿನ್ನೆ ನಡೆದಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ :ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ಸುಮಲತಾ : ಅಭಿಷೇಕ್ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ?

Advertisement

Udayavani is now on Telegram. Click here to join our channel and stay updated with the latest news.

Next