Advertisement

ಮುಂಬಯಿ ರೈಲುಗಳ ನಿರೀಕ್ಷೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರಯಾಣಿಕರು

01:33 PM Oct 12, 2020 | sudhir |

ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ರೈಲು ಸಂಚಾರ ಸ್ಥಗಿತಗೊಂಡು 7 ತಿಂಗಳು ಸಮೀಪಿಸುತ್ತಿದ್ದು, ಕರಾವಳಿ ಕರ್ನಾಟಕದ  ಪ್ರಮುಖ ಸಂಚಾರ ವ್ಯವಸ್ಥೆಯೊಂದು ಸ್ತಬ್ಧಗೊಂಡಿದೆ.

Advertisement

ರೈಲ್ವೇ ಮಂಡಳಿ ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲುದ್ದೇಶಿಸಿರುವ 200 ವಿಶೇಷ ರೈಲುಗಳಲ್ಲಿ ಮಂಗಳೂರು-ಮುಂಬಯಿ ಮಾರ್ಗವನ್ನು ಸೇರಿಸಿ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಸೆಂಟ್ರಲ್‌ ರೈಲ್ವೇ ವಲಯ ಕೂಡ ರೈಲ್ವೇ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ – ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸ éಗಂಧ ಎಕ್ಸ್‌ ಪ್ರಸ್‌ ಹಾಗೂ ಮಂಗಳೂರು ಜಂಕ್ಷನ್‌- ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲು ಮಾ. 21ರಿಂದ ಸ್ಥಗಿತಗೊಂಡಿದೆ. ಪ್ರಸ್ತುತ ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ತಿರುವನಂತಪುರ-ಕುರ್ಲಾ ವಿಶೇಷ ರೈಲು (ರೈಲು ನಂ. 06345/346) ಹಾದು ಹೋಗುತ್ತಿದೆ. ಕರಾವಳಿ ಕರ್ನಾಟಕದ ಜನರು ಈ ರೈಲು ಸೇವೆಯನ್ನು ಅವಲಂಬಿಸಬೇಕಾಗಿದೆ.

ಇದನ್ನೂ ಓದಿ:ಸಚಿವರುಗಳ ದಿಢೀರ್ ಖಾತೆ ಬದಲಾವಣೆ: ಬಿಜೆಪಿ ನಾಯಕರಲ್ಲಿ ಅಸಮಾಧಾನ, ರಾಮುಲು ಬೇಸರ

ಹಬ್ಬಗಳ ಹಿನ್ನೆಲೆಯಲ್ಲಿ ಅ. 15ರಿಂದ ನವೆಂಬರ್‌ 30ರ ವರೆಗೆ ದೇಶದೆಲ್ಲಡೆ 200 ವಿಶೇಷ ರೈಲುಗಳನ್ನು ಓಡಿಸಲು ಮಂಡಳಿ ನಿರ್ಧರಿಸಿದೆ. ಪ್ರಥಮ ಹಂತವಾಗಿ 39 ವಿಶೇಷ ರೈಲುಗಳಿಗೆ ಅನುಮತಿಸಲಾಗಿದ್ದು, ಇದರಲ್ಲಿ ಕರ್ನಾಟಕ ಭಾಗದಿಂದ ಯಶವಂತಪುರದಿಂದ ಕಾಮಕ್ಯ, ಬಾರ್ಮಾರ್‌, ಹೌರಾ ಹಾಗೂ ಬೆಂಗಳೂರು -ಚೆನ್ನೈ ಸೇರಿದಂತೆ 5 ರೈಲುಗಳಿವೆ.

Advertisement

ವಿಶೇಷ ರೈಲು ಸಂಚಾರಕ್ಕೆ ಅವಕಾಶ
ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಚೆನ್ನೈ ಎಕ್ಸ್‌ ಪ್ರಸ್‌ ಮಾತ್ರ ಸಂಚರಿಸುತ್ತಿದೆ. ಬೆಂಗಳೂರು ವಿಶೇಷ ರೈಲನ್ನು ಪ್ರಯಾಣಿಕರ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಕೊರೊನಾ ಪೂರ್ವದಲ್ಲಿ ಮಂಗಳೂರು ಜಂಕ್ಷನ್‌ನಿಂದ ಸಂಚರಿಸುತ್ತಿದ್ದ ಮಂಗಳೂರು ಜಂಕ್ಷನ್‌-ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲನ್ನು ರೈಲು ಸಂಚಾರ ಸಾಮಾನ್ಯಸ್ಥಿತಿಗೆ ಬರುವವರೆಗೆ ವಿಶೇಷ ರೈಲು ಆಗಿ ಓಡಿಸಬಹುದಾಗಿದೆ ಎಂಬ ಬೇಡಿಕೆಯನ್ನು ಕರಾವಳಿ ಕರ್ನಾಟಕದ ರೈಲ್ವೇ ಬಳಕೆದಾರರು ಮಂಡಿಸಿದ್ದಾರೆ. ಕೊಂಕಣ ಮಾರ್ಗದ ವ್ಯಾಪ್ತಿಯನ್ನು ಹೊಂದಿರುವ ಕೇಂದ್ರ ರೈಲ್ವೇ ಕೂಡ ಹಬ್ಬಗಳ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮುಂಬಯಿಗೆ ಕೋವಿಡ್‌-19 ವಿಶೇಷ ರೈಲು ಸಂಚಾರದ ಪ್ರಸ್ತಾವನೆಯನ್ನು ರೈಲ್ವೇ ಮಂಡಳಿಯ ಮುಂದಿರಿಸಿದೆ.

ಇದನ್ನೂ ಓದಿ:ಪ್ರಯಾಣಿಕರ ಸೆಳೆಯಲು ನಮ್ಮ ಮೆಟ್ರೋ ಪ್ಲಾನ್‌ : ಪೇಟಿಎಂ, ಗೂಗಲ್‌ಪೇ ನಲ್ಲೇ ರಿಚಾರ್ಜ್‌

ವಿಶೇಷ ರೈಲಿನ ಆವಶ್ಯಕತೆ
ಕೊರೊನಾ ಕಾರಣದಿಂದಾಗಿ ಉದ್ಯೋಗ, ವಾಣಿಜ್ಯ ಚಟುವಟಿಕೆಗಳನ್ನು ತೊರೆದು ಊರಿಗೆ ಬಂದಿದ್ದವರು ಮರಳಿ ಮುಂಬಯಿಯತ್ತ ತೆರಳಲು ಆರಂಭಿಸಿದ್ದಾರೆ. ಅದುದರಿಂದ ವಿಶೇಷ ರೈಲು ಸಂಚಾರ ಅತೀ ಅವಶ್ಯವಾಗಿದೆ.

ಮಂಗಳೂರಿನಿಂದಲೂ ವಿಶೇಷ ರೈಲುಗಳ ಸಂಚಾರ ಅಗತ್ಯವಿದೆ. ರೈಲ್ವೇ ಮಂಡಳಿ ಆರಂಭಿಸಲುದ್ದೇಶಿಸಿರುವ 200 ರೈಲುಗಳಲ್ಲಿ ಮಂಗಳೂರು-ಮುಂಬಯಿ ಸೇರಿದಂತೆ ಮಂಗಳೂರು ಭಾಗಕ್ಕೂ ಕೆಲವು ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈಲ್ವೇ ಸಚಿವರನ್ನು ಕೋರಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next