Advertisement

Mumbai ; ಅರ್ಷದೀಪ್ ದಾಳಿಗೆ ವಿಕೆಟ್ ತುಂಡು ತುಂಡು ; ಪಂಜಾಬ್ ಜಯಭೇರಿ

11:38 PM Apr 22, 2023 | Team Udayavani |

ಮುಂಬೈ : ಇಲ್ಲಿ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 13 ರನ್ ಗಳಿಂದ ಜಯ ಸಾಧಿಸಿದೆ. ಪಂಜಾಬ್ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Advertisement

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಕಲೆ ಹಾಕಿತು.

ಮ್ಯಾಥ್ಯೂ ಶಾರ್ಟ್11,ಪ್ರಭ್‌ಸಿಮ್ರಾನ್ 26,ಲಿವಿಂಗ್‌ಸ್ಟೋನ್ 10, ಅಥರ್ವ ಟೈಡೆ 29 ,ಹರ್‌ಪ್ರೀತ್ ಸಿಂಗ್ 41,ಸ್ಯಾಮ್ ಕುರ್ರನ್ 55, ಜಿತೇಶ್ ಶರ್ಮಾ25, ಹರ್‌ಪ್ರೀತ್ ಬ್ರಾರ್ 5 ರನ್ ಕೊಡುಗೆ ಸಲ್ಲಿಸಿದರು.

ಗುರಿ ಬೆನ್ನಟ್ಟಿದ ಮುಂಬೈ 6 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ತವರಿನಲ್ಲಿ ಸೋಲು ಅನುಭವಿಸಿತು. ನಾಯಕ ರೋಹಿತ್ ಶರ್ಮಾ 44, ಕ್ಯಾಮರೂನ್ ಗ್ರೀನ್ 67 ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 57 ರನ್ , ಟಿಮ್ ಡೇವಿಡ್ ಔಟಾಗದೆ 25 ರನ್ ಗಳಿಸಿದರೂ ಗೆಲುವು ಕಾಣಲು ಸಾಧ್ಯವಾಗಲಿಲ್ಲ.

Advertisement

ಕೊನೆಯ ರೋಚಕ ಓವರ್ ನಲ್ಲಿ ತಿಲಕ್ ವರ್ಮ ಮತ್ತು ನೆಹಾಲ್ ವಧೇರಾ ಅವರನ್ನು ಅರ್ಷದೀಪ್ ಸಿಂಗ್ ಕ್ಲೀನ್ ಬೌಲ್ಡ್ ಮಾಡಿದರು. ಎರಡೂ ಬಾರಿ ವಿಕೆಟ್ ಮುರಿದು ಹೋಯಿತು. ಬದಲಿಸಿ ಆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next