Advertisement

ಮುಂಬಯಿ: ರನ್‌ ವೇ ದಾಟಿ ಮುನ್ನುಗ್ಗಿ ನಿಂತ ಸ್ಪೈಸ್‌ ಜೆಟ್‌ ವಿಮಾನ; ಪ್ರಯಾಣಿಕರು ಸುರಕ್ಷಿತ

10:01 AM Jul 03, 2019 | Team Udayavani |

ಮುಂಬಯಿ : ಜೈಪುರದಿಂದ ಹೊರಟು ಬಂದ ಸ್ಪೈಸ್‌ ಜೆಟ್‌ ವಿಮಾನ ಇಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸೋಮವಾರ ತಡರಾತ್ರಿ ಇಳಿಯುವ ಸಂದರ್ಭದಲ್ಲಿ ರನ್‌ ವೇ ದಾಟಿ ನಿಂತ ಘಟನೆ ವರದಿಯಾಗಿದೆ.

Advertisement

ಜೈಪುರದಿಂದ ಹೊರಟು ಬಂದ ಎಸ್‌ಜಿ 6237 ಸ್ಪೈಸ್‌ ಜೆಟ್‌ ಬೋಯಿಂಗ್‌ ವಿಮಾನ ಸೋಮವಾರ ತಡ ರಾತ್ರಿ 11.51ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ರನ್‌ ವೇ ದಾಟಿ ಮುನ್ನುಗ್ಗಿದಾಗ ಪ್ರಯಾಣಿಕರು ತೀವ್ರವಾಗಿ ಆತಂಕಿತರಾಗಿದರು.

ರನ್‌ ವೇ ದಾಟಿಯೂ ವಿಮಾನ ಸುರಕ್ಷಿತವಾಗಿ ನಿಂತಾಗ ಅದರೊಳಗಿನ ಪ್ರಯಾಣಿಕರನ್ನು ಇಳಿಸುವಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನೆರವಾದರು.

ರನ್‌ ವೇ ದಾಟಿ ಮುನ್ನುಗ್ಗಿ ಕೊನೆಗೂ ವಿಮಾನ ನಿಂತ ಈ ಆತಂಕಕಾರಿ ಘಟನೆಯಲ್ಲಿ ವಿಮಾನಕ್ಕೆ ಆಗಿರುವ ಹಾನಿಯ ಬಗ್ಗೆ ಇದೀಗ ಇಂಜಿನಿಯರ್‌ಗಳ ತಂಡ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next