Advertisement

ಮೂಲ್ಕಿ: ಸ್ವಚ್ಚತಾ ಅಭಿಯಾನ

01:07 PM Oct 03, 2017 | Team Udayavani |

ಮೂಲ್ಕಿ: ಪ್ರಧಾನಿ ಮೋದಿಯವರು ಕಂಡಿರುವ ಸ್ವಚ್ಚ ಭಾರತ್‌ ಯೋಜನೆಯಲ್ಲಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಪರಿಸರ ಸ್ವಚ್ಚಗೊಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮಂಗಳೂರು ತಾಲೂಕು ಪಂಚಾಯತ ಸದಸ್ಯ ಶರತ್‌ ಕುಬೆವೂರು ಹೇಳಿದರು.

Advertisement

ಅವರು ಶಿಮಂತೂರು ಶ್ರೀ ಆದಿಜನಾರ್ದನ ಯುವಕ ಮಂಡಲದ ಸದಸ್ಯರಿಂದ ಕಿಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಶಿಮಂತೂರು ಆದಿಜನಾರ್ದನ ದೇವಸ್ಥಾನದಿಂದ ರಾಜ್ಯ ಹೆದ್ದಾರಿಯ ದ್ವಾರದವರೆಗಿನ ಒಂದೂವರೆ ಕೀ.ಮೀ. ರಸ್ತೆಯನ್ನು ಮಹಾತ್ಮಾಗಾಂಧಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜಯಂತಿಯ ಅಂಗವಾಗಿ ನಡೆದ ನಗರ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ಸತೀಶ್‌ ಶೆಟ್ಟಿ ಸ್ವಾಗತಿಸಿದರು.

ಪಂಚಾಯತ್‌ ಸದಸ್ಯ ಹರೀಶ್‌ ಶೆಟ್ಟಿ, ಮಾಜಿ ಸದಸ್ಯ ಉದಯ ಶೆಟ್ಟಿ ಆದಿಧನ್‌, ಉಮೇಶ್‌ ಭಂಡಾರಿ, ನಿತಿನ್‌ ಶೆಟ್ಟಿ, ರಂಜನ್‌ ಶೆಟ್ಟಿ ಕಿಲ್ಪಾಡಿ, ಕುಮಾರ್‌ ಶೆಟ್ಟಿ, ಕಿಶೋರ್‌ ಶೆಟ್ಟಿ ಪರೆಂಕಿಲ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next