Advertisement

SP-BSP ಮೈತ್ರಿ: ಮುಲಾಯಂ ಅಸಮಾಧಾನ, ಅಖೀಲೇಶ್‌ಗೆ ತರಾಟೆ

11:12 AM Feb 21, 2019 | udayavani editorial |

ಲಕ್ನೋ : ಬಿಎಸ್‌ಪಿ ಜತೆಗೆ ಎಸ್‌ಪಿ ಮೈತ್ರಿ ಮಾಡಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರು, ಇದಕ್ಕಾಗಿ ತನ್ನ ಪುತ್ರ ಅಖೀಲೇಶ್‌ ಯಾದವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

ಮಾಯಾವತಿ ಪಕ್ಷಕ್ಕೆ ರಾಜ್ಯದಲ್ಲಿನ ಅರ್ಧಾಂಶ ಲೋಕಸಭಾ  ಸೀಟುಗಳನ್ನು ಬಿಟ್ಟುಕೊಟ್ಟದ್ದು ಯಾಕೆ ಎಂದು ಖಾರವಾಗಿ ಅಖೀಲೇಶ್‌ಗೆ ಪ್ರಶ್ನಿಸಿರುವ ಮುಲಾಯಂ, ಬಿಎಸ್‌ಪಿ ಜತೆಗಿನ ಎಸ್‌ಪಿ ಮೈತ್ರಿಯಿಂದ ತನಗಾಗಿರುವ ನೋವು, ದುಃಖ, ಅಸಮಾಧಾನವನ್ನು ಹೊರಹಾಕಿದ್ದಾರೆ. 

ಈಚೆಗೆ ಸಂಸತ್‌ ಅಧಿವೇಶನದ ಕೊನೇ ದಿನ ಮುಲಾಯಂ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಸಾರಿ, ನೀವೇ ಮುಂದಿನ ಪ್ರಧಾನಿಯಾಗಬೇಕು ಎಂದು ಹಾರೈಸಿದ ಕೆಲವೇ ದಿನಗಳ ತರುವಾಯ ಮುಲಾಯಂ ಎಸ್‌ಪಿ – ಬಿಎಸ್‌ಪಿ ಮೈತ್ರಿಯನ್ನು ಖಂಡಿಸಿ ಮಾತನಾಡಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next