Advertisement

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

12:30 AM Jun 18, 2021 | Team Udayavani |

ಹೊಸದಿಲ್ಲಿ: ತಮಗೆ ನೀಡಲಾಗಿರುವ ಝಡ್‌ ಮಾದರಿ ಭದ್ರತೆಯನ್ನು ಹಿಂಪಡೆ­ಯಬೇಕು ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದ ಮುಕುಲ್‌ ರಾಯ್‌ ಅವರ ಮನವಿಯನ್ನು ಪುರಸ್ಕರಿಸಲಾಗಿದೆ.

Advertisement

ಹಾಗಾಗಿ ರಾಯ್‌ ಅವರಿಗೆ ನೀಡಲಾಗಿರುವ ಝಡ್‌ ಮಾದರಿಯ ಭದ್ರತೆ ಹಿಂಪಡೆಯುವಂತೆ ಕೇಂದ್ರೀಯ ಮೀಸಲು ಪಡೆಗೆ (ಸಿಆರ್‌ಪಿಎಫ್) ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

2015ರಲ್ಲಿ ಟಿಎಂಸಿಯಿಂದ ಹೊರಬಂದಿದ್ದ ಅವರು, 2017ರಲ್ಲಿ ಬಿಜೆಪಿ ಸೇರಿದ್ದರು. ಇತ್ತೀಚೆಗೆ ಮುಕುಲ್‌ ರಾಯ್‌, ಬಿಜೆಪಿ ತೊರೆದು ತಮ್ಮ ಪುತ್ರ ಶುಭಾಂಶು ಜತೆಗೆ ಟಿಎಂಸಿಗೆ ಮರುಸೇರ್ಪಡೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next