Advertisement

ಪುನೀತ್‌ ನಿರ್ಮಾಣದ ಹೊಸ ಚಿತ್ರಕ್ಕೆ ಮುಹೂರ್ತ 

11:21 AM Dec 04, 2018 | |

ನಟ ಪುನೀತ್‌ ರಾಜಕುಮಾರ್‌ ಅಭಿನಯದ ಜೊತೆ ಜೊತೆಯಲ್ಲಿಯೇ ನಿರ್ಮಾಣದಲ್ಲೂ ಇತ್ತೀಚೆಗೆ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಈಗಾಗಲೇ ಪುನೀತ್‌ ರಾಜಕುಮಾರ್‌ ಒಡೆತನದ “ಪಿಆರ್‌ಕೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸದ್ಯ “ಕವಲು ದಾರಿ’ ಹಾಗೂ “ಮಾಯಾ ಬಜಾರ್‌’ ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಇದರ ನಡುವೆಯೇ ಮೂರನೇ ಚಿತ್ರವನ್ನು ಸದ್ದಿಲ್ಲದೆ ಸರಳವಾಗಿ ಸೆಟ್ಟೇರಿದೆ. ಸೋಮವಾರ ಬೆಂಗಳೂರಿನ ಸದಾಶಿವನಗರ ದೇವಸ್ಥಾನವೊಂದರಲ್ಲಿ ಚಿತ್ರಕ್ಕೆ ಪೂಜೆ ಮಾಡಲಾಗಿದೆ.

Advertisement

ಈ ಚಿತ್ರವನ್ನು ಪನ್ನಗಾಭರಣ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, “ಪಿಆರ್‌ಕೆ ಪ್ರೊಡಕ್ಷನ್ಸ್‌’ನ ಈ ಚಿತ್ರಕ್ಕೆ ಪನ್ನಗಾಭರಣ ನಿರ್ದೇಶನ ಮಾಡುತ್ತಿದ್ದಾರೆ. ಆರ್‌ಜೆ ಆಗಿ, ಐಪಿಎಲ್‌ ನಿರೂಪಕನಾಗಿ ಮನರಂಜಿಸುತ್ತಿದ್ದ, “ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪರಿಚಯವಾದ ದಾನಿಶ್‌ ಸೇಠ್ ಈ ಚಿತ್ರದಲ್ಲಿಯೂ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ನಾಯಕ ದಾನಿಶ್‌, “ಇದೊಂದು ಬೇರೆ ತರಹದ ಪ್ರಯತ್ನ. ಒಬ್ಬ ಫ್ರೆಂಚ್‌ ವ್ಯಕ್ತಿ ಹಾಗೂ ಶಿವಾಜಿನಗರದ ಆಟೋ ಡ್ರೈವರ್‌ ನಡುವೆ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ಮಜವಾಗಿ ಹೇಳಲು ನಿರ್ದೇಶಕರು ಹೊರಟಿದ್ದಾರೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಮುಹೂರ್ತ ವೇಳೆ ಪುನೀತ್‌ ರಾಜಕುಮಾರ್‌, ಅಶ್ವಿ‌ನಿ ಪುನೀತ್‌ ರಾಜಕುಮಾರ್‌, ನಟ ದಾನಿಶ್‌ ಸೇಠ್, ನಟಿ ದಿಶಾ ಮದನ್‌, ನಿರ್ದೇಶಕ ಪನ್ನಗಾಭರಣ ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next