Advertisement

Bangla ಹಿಂದೂಗಳು ಸಾಯುವಾಗ ಮುಫ್ತಿ ಮೌನವಾಗಿದ್ದರು: ಬಿಜೆಪಿ

01:39 AM Sep 30, 2024 | Team Udayavani |

ಶ್ರೀನಗರ: ಲೆಬನಾನ್‌ನಲ್ಲಿ ಸಾವೀಗೀಡಾದವರಿಗೆ ಶಾಂತಿ ಕೋರಿ ಮೆಹಬೂಬಾ ಮುಫ್ತಿ ಚುನಾವಣ ಪ್ರಚಾರ ರದ್ದು ಮಾಡಿರುವ ನಡೆಯನ್ನು ಬಿಜೆಪಿ ಟೀಕಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸಾಯುವಾಗ ಮುಫ್ತಿ ಮೌನವಾಗಿದ್ದರು ಟೀಕಿಸಿದೆ.

Advertisement

ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಕವಿಂದರ್‌ ಗುಪ್ತಾ, ಹೆಜ್ಬುಲ್ಲಾ ನಾಯಕನ ಸಾವಿನಿಂದ ಮುಫ್ತಿ ಅವರಿಗೆ ನೋವಾಗಿದೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಾವಿಗೆ ಅವರು ಸುಮ್ಮನಿದ್ದಾರೆ. ಇದೊಂದು ರಾಜಕೀಯ ಸ್ಟಂಟ್‌ ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್‌.ಪಿ.ಸಿಂಗ್‌ ಮಾತನಾಡಿ, ಪ್ರಚಾರವನ್ನು ರದ್ದು ಮಾಡುವ ಮೂಲಕ ಉಗ್ರರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಈ ಮೂಲಕ ಉಗ್ರರನ್ನು ಹುತಾತ್ಮರು ಎಂದು ಕರೆಯುತ್ತಿದ್ದಾರೆ. ಬುರ್ಹಾನ್‌ ವಾನೀ ಸತ್ತಾಗಲೂ ಅವರು ಇದೇ ರೀತಿ ನಡೆದುಕೊಂಡಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next