Advertisement

ಲಂಬಾಣಿಗರಿಂದ ಪೂಜೆ

05:07 PM Apr 17, 2020 | Naveen |

ಮುದಗಲ್ಲ: ಜಗತ್ತಿನಾದ್ಯಂತ ತಲ್ಲಣವನ್ನುಂಟು ಮಾಡಿದ ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಲಂಬಾಣಿ ತಾಂಡಾ ನಿವಾಸಿಗಳು ವಿಶೇಷ ಪೂಜೆ ಮಾಡಲು ಮುಂದಾಗಿದ್ದಾರೆ.

Advertisement

ದೇಸಾಯಿ ಭೋಗಾಪುರ ಕಸ್ತೂರಿ ತಾಂಡಾ, ಪಾಪಣ್ಣನ ತಾಂಡಾ, ದಾದುಡಿ ತಾಂಡಾ, ಕಿರಣ್ಣನ ತಾಂಡಾ, ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಹಡಗಲಿ ತಾಂಡಾ, ಸೊಂಪುರ ತಾಂಡಾ ಸೇರಿದಂತೆ ಹಲವಾರು ಬಂಜಾರ ಸಮುದಾಯದವರು 3 ಮಂಗಳವಾರ ಹಾಗೂ 2 ಶುಕ್ರವಾರ ಮನೆಯಲ್ಲಿ ಉಪ್ಪು, ಅರಿಶಿಣ ಹಾಗೂ ಎಣ್ಣೆ ಬಳಸದೇ ಅಡುಗೆ ತಯಾರಿಸಿ ರೊಟ್ಟಿ ಇಲ್ಲದೇ ಊಟ ಮಾಡುವ ಮೂಲಕ ತಾಂಡಾದಲ್ಲಿನ ಗ್ರಾಮದೇವತೆಗೆ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಮಂಗಳವಾರ ಗ್ರಾಮದೇವತೆಗೆ ಹೋಳಿಗೆ ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next