Advertisement

ಕಾಲುವೆಗೆ ಚಕ್ಕಡಿ ಉರುಳಿ ಬಿದ್ದು ಎತ್ತು ಸಾವು : ರೈತ ಪ್ರಾಣಾಪಾಯದಿಂದ ಪಾರು

12:23 PM Mar 18, 2022 | Team Udayavani |

ಮುದ್ದೇಬಿಹಾಳ : ಎತ್ತುಗಳನ್ನು ಹೂಡಿದ್ದ ಚಕ್ಕಡಿಯೊಂದು ಹೊಲಕ್ಕೆ ತೆರಳುತ್ತಿದ್ದ ವೇಳೆ ಆಯತಪ್ಪಿ ಆಲಮಟ್ಟಿ ಎಡದಂಡೆ ಕಾಲುವೆಗೆ ಬಿದ್ದು ಒಂದು ಎತ್ತು ಸಾವನ್ನಪ್ಪಿ, ಇನ್ನೊಂದು ಎತ್ತು ಮತ್ತು ಚಕ್ಕಡಿ ಓಡಿಸುತ್ತಿದ್ದ ರೈತ ಪ್ರಾಣಾಪಾಯದಿಂದ ಪಾರಾದ ಘಟನೆ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

Advertisement

ಗೆದ್ದಲಮರಿ – ಹರಿಂದ್ರಾಳ ಮಧ್ಯೆದಲ್ಲಿ ಬರುವ ಹೊಲಕ್ಕೆ ಕಾಲುವೆ ಪಕ್ಕದ ಕಚ್ಚಾ ರಸ್ತೆಯಲ್ಲಿ ತೆರಳುವ ವೇಳೆ ಈ ಘಟನೆ ನಡೆದಿದೆ. ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಚಕ್ಕಡಿಯ ಸಮೇತ ಎತ್ತುಗಳು ಮುಳುಗಿವೆ.

ರೈತ ಸಿದ್ದಪ್ಪ ಕೋಳೂರ ಹೇಗೋ ಮಾಡಿ ತನ್ನ ಜೀವ ಉಳಿಸಿಕೊಂಡಿದ್ದಾನೆ. ಇನ್ನೊಂದು ಎತ್ತಿ ಈಜಿ ಮೇಲೆ ಬಂದಿದೆ. ಆದರೆ ಮತ್ತೊಂದು ಎತ್ತು ಕೊರಳಿಗೆ ಕಟ್ಟಿದ್ದ ಕೊಲಗದ ಹಗ್ಗ ಗಂಟುಬಿದ್ದು ತಪ್ಪಿಸಿಕೊಳ್ಳಲಾಗದೆ ನೀರಲ್ಲಿಯೇ ಮುಳುಗಿ ಸಾವನ್ನಪ್ಪಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪಾಠ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ; ರಾಜ್ಯದಲ್ಲೂ ಚರ್ಚೆಗೆ ಕಾರಣವಾದ ಗುಜರಾತ್ ನಡೆ!

Advertisement

Udayavani is now on Telegram. Click here to join our channel and stay updated with the latest news.

Next