Advertisement

ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

04:39 PM May 22, 2020 | Team Udayavani |

ಮುದಗಲ್ಲ: ಆರ್ಯಭೋಗಾಪುರದಲ್ಲಿ ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆಗೆ ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರ ನೇತೃತ್ವದಲ್ಲಿ ಪೊಲೀಸ್‌ ಠಾಣೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು, ದಲಿತ ಮುಖಂಡರ ಸಭೆಯಲ್ಲಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು.

Advertisement

ಡಿವೈಎಸ್‌ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳಲಾಯಿತು. ಏತನ್ಮಧ್ಯೆ ಗ್ರಾಮದ ದಲಿತ ಮುಖಂಡರ ಜಮೀನಿನಲ್ಲಿ ಗ್ರಾಪಂಯವರು ಕಳೆದ ಕೆಲ ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡುತ್ತಿದ್ದು ಏಕಾಏಕಿ ಕ್ಷುಲ್ಲಕ ಕಾರಣಗಳಿಂದ ಸ್ಥಗಿತಗೊಂಡಿತು. ಜೊತೆಗೆ ಜಾತಿ ನಿಂದನೆ ದೂರು ಸಲ್ಲಿಸಿದ್ದರಿಂದ ಡಿವೈಎಸ್‌ಪಿ ಮಧ್ಯಸ್ಥಿಕೆವಹಿಸಿ ಸಭೆ ಕರೆದು ಕುಡಿವ ನೀರಿನ ಸರಬರಾಜಿಗೆ ಮಾರ್ಗೋಪಾಯ ಹುಡುಕಿ ನೀರು ಸರಬರಾಜು ಮಾಡುವಂತೆ ಸಭೆಯಲ್ಲಿದ್ದ ಜೆಇ ವೆಂಕಟೇಶ ಹಾಗೂ ಪಿಡಿಒ ಶಂಕರಪ್ಪ ಅವರಿಗೆ ಸೂಚಿಸಿದರು.

ಕುಡಿವ ನೀರಿಗಾಗಿ ಸಂಪರ್ಕ ಕಲ್ಪಿಸಿದ ವಿದ್ಯುತ್‌ ಪರಿವರ್ತಕಕ್ಕೆ ನೀರಿನ ಸರಬರಾಜು ಸಂಪರ್ಕವಿರಬೇಕೇ ಹೊರತು ಬೇರೆ ಯಾವುದೇ ರೀತಿಯ ವಿದ್ಯುತ್‌ ಸಂಪರ್ಕ ಕೊಡಬಾರದು ಎಂದು ಸಭೆಯಲ್ಲಿದ್ದ ಮುಖಂಡರು ಸಲಹೆ ನೀಡಿದರು. ಸಭೆಯಲ್ಲಿ ಪಿಎಸ್‌ಐ ಡಾಕೇಶ, ಪಿಡಿಒ ಶಂಕ್ರಪ್ಪ, ಜೆಇ ವೆಂಕಟೇಶ, ಆನಂದ ಭಂಡಾರಿ, ಸಂತೋಷಕುಮಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next