Advertisement

 MUDA CASE: 8 ಮಂದಿಗೆ ಇ.ಡಿ. ನೋಟಿಸ್‌ ಜಾರಿ

12:26 AM Oct 25, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ಮತ್ತಷ್ಟು ಬಿರುಸುಗೊಳಿಸಿದ್ದು, ಮುಡಾದ 8 ಮಂದಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.

Advertisement

ಮುಡಾ ವಿಶೇಷ ತಹಸೀಲ್ದಾರ್‌ ರಾಜಶೇಖರ್‌, ವಿಶೇಷ ಭೂ ಸ್ವಾಧೀನಾ ಧಿಕಾರಿ ಶುೃತಿ, ಹಿಂದಿನ ಆಯುಕ್ತರ ಆಪ್ತ ಕಾರ್ಯದರ್ಶಿ ಪ್ರಶಾಂತ್‌, ಬೆರಳಚ್ಚುಗಾರ ಚಂದ್ರು, ಎಂಜಿನಿಯರ್‌ಗಳಾದ ಆರ್‌. ಶ್ರೀನಿವಾಸ್‌, ರಾಜಶೇಖರ್‌ ಸಹಿತ 8 ಮಂದಿಗೆ ನೋಟಿಸ್‌ ನೀಡಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.

ಅ. 18 ಮತ್ತು 19ರಂದು ಮುಡಾ ಕಚೇರಿಯ ಮೇಲೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳ ತಂಡ ಸತತ 29 ಗಂಟೆಗಳ ಕಾಲ ಮುಡಾ ಅಧಿಕಾರಿ, ಸಿಬಂದಿಯ ವಿಚಾರಣೆಯೊಂದಿಗೆ 8 ಸಾವಿರ ಪುಟಗಳ ದಾಖಲಾತಿಯನ್ನು ಸಂಗ್ರಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next