Advertisement

ಧೋನಿಯಿಲ್ಲದ ಭಾರತ ಊಹಿಸಲಸಾಧ್ಯ!

09:10 AM Sep 15, 2017 | |

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಭವಿಷ್ಯದ ಕುರಿತ ಗೊಂದಲಗಳನ್ನು ಕೋಚ್‌ ರವಿಶಾಸ್ತ್ರಿ ಮತ್ತೂಮ್ಮೆ ಸ್ಪಷ್ಟ ಮಾತುಗಳಲ್ಲಿ ಹೊಡೆದೋಡಿಸಿದ್ದಾರೆ.

Advertisement

ಧೋನಿಯಂತಹ ಕ್ರಿಕೆಟಿಗರನ್ನು ಎಷ್ಟು ಬಾರಿ ನೀವು ನೋಡಲು ಸಾಧ್ಯ? 2019ರ ಏಕದಿನ ವಿಶ್ವಕಪ್‌ನಲ್ಲಿ ಅವರಿಲ್ಲದ ಭಾರತ ತಂಡವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಖಂಡತುಂಡ ಪದಗಳಲ್ಲಿ ಶಾಸ್ತ್ರಿ ಹೇಳಿದ್ದಾರೆ. ಇದು ಎಂ.ಎಸ್‌ .ಧೋನಿ ಅಭಿಮಾನಿಗಳು ನಿಟ್ಟುಸಿರುಬಿಡಲು
ಕಾರಣವಾಗಿದೆ. 

ಧೋನಿ ಒಬ್ಬ ದಂತಕಥೆ. ಅವರು ಸುನೀಲ್‌ ಗಾವಸ್ಕರ್‌, ಸಚಿನ್‌ ತೆಂಡುಲ್ಕರ್‌, ಕಪಿಲ್‌ದೇವ್‌ ಸಾಲಿನಲ್ಲಿ ಬರುವ ಆಟಗಾರ. ಅವರು ಭಾರತ ತಂಡದ ಅವಿಭಾಜ್ಯ ಅಂಗ. ಅವರು ತಂಡದ ಆಟಗಾರರಿಗೆ ಸ್ಫೂರ್ತಿ. 2019ರ ಏಕದಿನ ವಿಶ್ವಕಪ್‌ನಲ್ಲಿ ಅವರಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಅಲ್ಲದೇ ಧೋನಿ ಸದ್ಯ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅವರ ವಿಕೆಟ್‌ ಕೀಪಿಂಗ್‌ ಉತ್ಕೃಷ್ಟವಾಗಿದೆ. ಒಬ್ಬ ಆಟಗಾರ ಹಿಂದೆ ಹೇಗೆಯೇ ಆಡಿದ್ದಿರಬಹುದು. ಆದರೆ ಅವರ ಸದ್ಯದ ಫಾರ್ಮ್ ಗಣನೆಗೆ ಬರುತ್ತದೆ. ಹಾಗೆ ನೋಡಿದಾಗ ಧೋನಿ ಅತ್ಯುತ್ತಮ
ಫಾರ್ಮ್ ಉಳಿಸಿಕೊಂಡಿದ್ದಾರೆ ಎಂದು ರವಿಶಾಸ್ತ್ರಿ ಹೊಗಳಿದ್ದಾರೆ.

ಇತ್ತೀಚೆಗೆ ಧೋನಿ ಭಾರತ ತಂಡದಲ್ಲಿ ಆಡುತ್ತಾರೋ, ಇಲ್ಲವೋ ಎಂಬ ಗೊಂದಲ ಉಂಟಾಗಿತ್ತು. ಅದಕ್ಕೆ ಸರಿಯಾಗಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್‌ ಕೂಡ ಧೋನಿ ಚೆನ್ನಾಗಿ ಆಡದಿದ್ದರೆ ಪರ್ಯಾಯ ನೋಡುತ್ತೇವೆ ಎಂದು ಹೇಳಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಧೋನಿ ಸತತ 3 ಪಂದ್ಯಗಳಲ್ಲಿ ಶ್ರೀಲಾಂಕಾವನ್ನು ಸೋಲಿಸಿ ತಮ್ಮ ಕುರಿತಾದ ಟೀಕೆಗಳಿಗೆ ಉತ್ತರ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next