Advertisement

M. P. Renukacharya:ಪ್ಯಾಲೆಸ್ತೇನ್‌ ಪರ ಧ್ವಜ ಹಾರಿಸುವವರ ಮೇಲೆ ಗುಂಡು ಹೊಡೆಯಿರಿ

08:10 PM Sep 17, 2024 | Team Udayavani |

ಹೊನ್ನಾಳಿ: ಈದ್‌ ಮಿಲಾದ್‌ ಹಬ್ಬದಲ್ಲಿ ಪ್ಯಾಲೆಸ್ತೇನ್‌ ಬಾವುಟ ಹಾರಿಸಿ ಉದ್ಧಟತನ ತೋರಿದವರಿಗೆ ಗುಂಡು ಹೊಡೆಯಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ತಾಲೂಕು ಬಿಜೆಪಿಯಿಂದ ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ ಕಲ್ಲು ತೂರಿದ, ಪೆಟ್ರೊಲ್‌ ಬಾಂಬ್‌ ಎಸೆದವರನ್ನು ತಕ್ಷಣ ಬಂಧಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಉಪಮುಖ್ಯಮಂತ್ರಿ ಸೇರಿದಂತೆ ಇತರ ಮಂತ್ರಿಗಳು ಟವೆಲ್‌ ಹಾಕುತ್ತಿದ್ದಾರೆ. ಕುರ್ಚಿಗಾಗಿ ಹೋರಾಟ ನಡೆದಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next