Advertisement

ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ಎಂಪಿ ಬಂಡಾಯ ಶಾಸಕರ ವಾಸ್ತವ್ಯ

11:12 PM Mar 10, 2020 | Team Udayavani |

ದೇವನಹಳ್ಳಿ: ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸುವ ಯತ್ನವಾಗಿ ಮಧ್ಯಪ್ರದೇಶದ ಕಾಂಗ್ರೆಸ್‌ನ 6 ಸಚಿವರು ಹಾಗೂ 11 ಶಾಸಕರು ಬಂಡಾಯವೆದ್ದಿದ್ದು, ಅವರೆಲ್ಲರೂ ತಾಲೂಕಿನ ನಂದಿ ಬೆಟ್ಟ ರಸ್ತೆಯಲ್ಲಿರುವ ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಬಣಕ್ಕೆ ಸೇರಿದ ಸಚಿವರು ಹಾಗೂ ಶಾಸಕರು ಇವರು ಎನ್ನಲಾಗಿದೆ.

Advertisement

ಸಚಿವರಾದ ತುಳಸಿ ಸಿಲಾವತ್‌, ಗೋವಿಂದ್‌ ಸಿಂಗ್‌ ರಜಪೂತ್‌, ಪ್ರಧುಮಾನ್‌ ಸಿಂಗ್‌ ತೋಮರ್‌, ಇರ್ಮತಿ ದೇವಿ, ಪ್ರಭುರಾಮ್‌ ಚೌದ್ರಿ, ಮಹೇಂದ್ರ ಸಿಸೋಡಿಯಾ ಹಾಗೂ ಶಾಸಕರಾದ ಮುನ್ನಾಲಾಲ್‌ ಗೋಯಲ್‌, ಗಿರಿರಾಜ್‌ ಧನ್‌ಸೋಟಿಯ, ಒಪಿ ಭಡೋರಿಯ, ವೀರ್‌ಜೇಂದ್ರ ಯಾದವ್‌, ಜೆಸ್ಪಾಲ್‌ ಜೂಲಿ, ಕಮಲೇಶ್‌ ಜಾಟವ್‌, ರಾಜ್‌ ವರ್ಧನ್‌ ಸಿಂಗ್‌, ರಘುರಾಜ್‌ ಕನಸಾನ, ಸುರೇಶ್‌ ಧಾಕಡ್‌, ಹರ್‌ದೀಪ್‌ ದುಂಗ್‌, ರಕ್ಷ ಸಿರೋನಿಯ ಜಸ್ವಂತ್‌ ಈ ಪೈಕಿ ಸೇರಿದ್ದಾರೆ.

ಸೋಮವಾರ ಮಾರತ್‌ಹಳ್ಳಿಯಲ್ಲಿರುವ ಆದರ್ಶ ರಿಟ್ರೇಟ್‌ನಲ್ಲಿ ತಂಗಿದ್ದ ಕಮಲ್‌ ನಾಥ್‌ ಸಂಪುಟದ 6 ಸಚಿವರು ಹಾಗೂ 11 ಶಾಸಕರ ಜೊತೆಗೆ ಸೋಮವಾರ ತಡ ರಾತ್ರಿ ಮತ್ತಿಬ್ಬರು ಶಾಸಕರು ಸೇರಿಕೊಂಡಿದ್ದಾರೆ ಎನ್ನಲಾಗಿದ್ದು, ಇವರೆಲ್ಲಾ ಈಗ ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಇವರು ಇಲ್ಲಿಯೇ ಇರುತ್ತಾರಾ? ಅಥವಾ ಬೇರೆ ಕಡೆ ಸ್ಥಳಾಂತರ ಆಗಲಿದ್ದಾರಾ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

ಬಿಗಿ ಬಂದೋಬಸ್ತ್: ರೆಸಾರ್ಟ್‌ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಎಸ್‌ಪಿ ರವಿ ಡಿ.ಚನ್ನಣ್ಣ ನವರ್‌ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ. ಅನುಮತಿಯಿಲ್ಲದೆ ರೆಸಾರ್ಟ್‌ ಒಳಗೆ ಯಾರನ್ನೂ ಬಿಡಲಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next