Advertisement

MP ಪ್ರತಾಪಸಿಂಹ ಸಹೋದರ ವಿಕ್ರಂ ಸಿಂಹ ಅರಣ್ಯ ಅಧಿಕಾರಿಗಳ ವಶಕ್ಕೆ

07:54 PM Dec 30, 2023 | Team Udayavani |

ಹಾಸನ: ಬೇಲೂರು ತಾಲೂಕು, ನಂದಗೊಂಡನಹಳ್ಳಿಯ ಸರಕಾರಿ ಭೂಮಿಯಲ್ಲಿ 126 ಮರಗಳನ್ನು ಕಡಿದ ಪ್ರಕರಣದಲ್ಲಿ ಮೈಸೂರು ಸಂಸದ ಪ್ರತಾಪಸಿಂಹ ಅವರ ಸಹೋದರ, ಸಕಲೇಶಪುರ ತಾಲೂಕು ಬಿರಡಹಳ್ಳಿಯ ನಿವಾಸಿ ವಿಕ್ರಂಸಿಂಹ ಅವರನ್ನು ಅರಣ್ಯ ಇಲಾಖೆ ಹಾಸನದ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

Advertisement

ಬೆಂಗಳೂರಿನ ಮಲ್ಲೇಶ್ವರ ದಲ್ಲಿರುವ ಅರಣ್ಯ ಭವನದಲ್ಲಿ ವಿಚಾರಣೆಗೊಳಪಡಿಸಿರುವ ಅರಣ್ಯ ಇಲಾಖೆ ಹಾಸನ ವಿಭಾಗದ ಅಧಿಕಾರಿಗಳು ವಿಕ್ರಂಸಿಂಹ ಅವರನ್ನು ಭಾನುವಾರ ಬೆಳಿಗ್ಗೆ ಬೇಲೂರು ತಾಲೂಕು ನಂದಗೊಂಡನಹಳ್ಳಿಗೆ ಕರೆತರುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next