Advertisement

ಚಾಲೀಸಾ ಪಠಿಸಿದರೆ ಕೊಲೆ : ಸಂಸದೆ ನವನೀತ್‌ ರಾಣಾಗೆ ಬೆದರಿಕೆ ಕರೆ

07:51 PM May 26, 2022 | Team Udayavani |

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಮನೆಯ ಮುಂದೆ ಹನುಮಾನ್‌ ಚಾಲೀಸಾ ಪಠಿಸುವುದಾಗಿ ಸವಾಲು ಎಸೆದಿದ್ದ ಸಂಸದೆ ನವನೀತ್‌ ರಾಣಾಗೆ ಬೆದರಿಕೆ ಕರೆಗಳು ಬರುತ್ತಿವೆ.

Advertisement

ಈ ವಿಚಾರವಾಗಿ ಅವರು ಬುಧವಾರ ದೆಹಲಿಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್‌ ದಾಖಲಾಗಿದೆ.

ಮಂಗಳವಾರ ಸಂಜೆ 5.27ರಿಂದ 5.47ರವರೆಗೆ ನವನೀತ್‌ ಅವರ ಖಾಸಗಿ ನಂಬರಿಗೆ 11 ಬೆದರಿಕೆ ಕರೆಗಳು ಬಂದಿದ್ದು, “ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ಸಾಯಿಸುತ್ತೇವೆ’, “ಇನ್ನೊಮ್ಮೆ ಹನುಮಾನ್‌ ಚಾಲೀಸ ಪಠಿಸಿದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next