Advertisement

ತೆಲುಗು ಪ್ರಭಾವ; ಯೋಜನೆ ಅರಿವಿಗೆ ನಿರ್ಧಾರ

05:01 PM Feb 21, 2021 | Team Udayavani |

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಗ್ರಾಮ ಕುಂಚಾವರಂ ವಲಯದಲ್ಲಿ ಸಾಕಷ್ಟು ಸಮಸ್ಯೆ ಇರುವುದರಿಂದ ಜನರು ತಮ್ಮ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಕಂದಾಯ ಇಲಾಖೆಗೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿ ಈ ಗ್ರಾಮ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಡಿಸಿ ವಿಜಯಾರಡ್ಡಿ ಜ್ಯೋತ್ಸ್ನಾ ಹೇಳಿದರು.

Advertisement

ಕುಂಚಾವರಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುಂಚಾವರಂ ಗ್ರಾಮ ತೆಲಂಗಾಣ ಮತ್ತು ಆಂಧ್ರಕ್ಕೆ ಹೊಂದಿಕೊಂಡು ಇರುವುದರಿಂದ ಇಲ್ಲಿನ ಜನರು ತೆಲಗು ಭಾಷೆ ಆಡುತ್ತಾರೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಬಗ್ಗೆ ಇಲ್ಲಿನ ಜನರಿಗೆ ಅರಿವಿಲ್ಲ. ಕಾರಣ ಇಲ್ಲಿಯೇ ಗ್ರಾಮ ವಾಸ್ತವ್ಯ ನಡೆಸಿ, ಜನರಿಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ನಿರ್ಧರಿಸಿದ್ದೇನೆ. ಕುಂಚಾವರಂ ಗಡಿಯಲ್ಲಿ ಅರಣ್ಯಪ್ರದೇಶ ಸುತ್ತಲಿನ ಪರಿಸರವು ನನಗೆ ಮೆಚ್ಚುಗೆಯಾಗಿದೆ ಎಂದರು.

ಎರಡು ದಶಕಗಳ ಹಿಂದೆ ಇಲ್ಲಿನ ತಾಂಡಾಗಳಲ್ಲಿ ಬಡತನದಿಂದಾಗಿ ಹೆಣ್ಣು ಹಸುಗೂಸು ಮಾರಾಟ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅಲ್ಲದೇ ಇಲ್ಲಿನ ಮಹಿಳೆಯರಲ್ಲಿರುವ ಅಪೌಷ್ಟಿಕತೆ ಮತ್ತು ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆ, ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಸಿಗುವ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರûಾ, ಪಹಣಿ ತಿದ್ದುಪಡಿ, ಆಹಾರ ಪಡಿತರ ಚೀಟಿ ಇನ್ನಿತರ ಸಾಕಷ್ಟು ಸಮಸ್ಯೆಗಳು ಈ ಭಾಗದಲ್ಲಿ ಇರುವುದರಿಂದ ಗ್ರಾಮ ವಾಸ್ತವ್ಯ ಮಾಡಿದ್ದೇನೆ ಎಂದರು.

ಕುಂಚಾವರಂ ಗ್ರಾಮಸ್ಥರಿಂದ 350 ಅರ್ಜಿಗಳು ಬಂದಿವೆ. ನಾನು 100 ಅರ್ಜಿ ಸ್ವೀಕರಿಸಿ ವಿಧವಾ, ವೃದ್ಧಾಪ್ಯ, ಅಂಗವಿಕಲ ವೇತನ ಮಂಜೂರಾತಿ ಆದೇಶ ಪತ್ರ ಸ್ಥಳದಲ್ಲಿಯೇ ನೀಡಿದ್ದೇನೆ. ಅಲ್ಲದೇ ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದರು.

ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಕುಂಚಾವರಂ ಗಡಿಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳತ್ತ ಜಿಲ್ಲಾಧಿಕಾರಿಗಳು ಗಮನ ಹರಿಸಿ ಇತ್ಯರ್ಥಗೊಳಿಸಬೇಕಾಗಿದೆ. ಅರಣ್ಯಭೂಮಿ ಸಾಗುವಳಿಯಡಿ ಸೇವು ನಾಯಿಕ ತಾಂಡಾದ ಹತ್ತಿರ ಇರುವ 300 ಎಕರೆ ಜಮೀನನ್ನು ಆಂಧ್ರದ ಬಲಿಷ್ಠ ರೈತರು ದಬ್ಟಾಳಿಕೆ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ನಮ್ಮ ರೈತರಿಗೆ ಆ ಜಮೀನು ಕೊಡಿಸಬೇಕು ಎಂದು ಹೇಳಿದರು.

Advertisement

ಈ ಹಿಂದೆ ಆಂಧ್ರ-ಕರ್ನಾಟಕ ಜಿಲ್ಲಾಧಿಕಾರಿಗಳು ಜಂಟಿ ಸರ್ವೇ ಮಾಡಿದ್ದರೂ ನಮ್ಮ ರೈತರಿಗೆ ಜಮೀನು ಬಿಟ್ಟು ಕೊಡುತ್ತಿಲ್ಲ. ಜಮೀನು ದಾಖಲೆಗಳಿವೆ. ಆದರೆ ಜಮೀನು ನಮ್ಮ ಸ್ವಾ ಧೀನದಲ್ಲಿ ಇಲ್ಲವೆಂದು ಸಂಸದರು ಜಿಲ್ಲಾಧಿ ಕಾರಿಗಳ ಗಮನಕ್ಕೆ ತಂದರು.

ಈ ಹಿಂದೆ ಚಿಂಚೋಳಿ ಮತಕ್ಷೇತ್ರದ ಶಾಸಕನಾಗಿದ್ದಾಗ ಕೈಗಾರಿಕೆ ತರಬೇತಿ ಕೇಂದ್ರ  ಮಂಜೂರಾತಿಗೊಳಿಸಿದ್ದೇನೆ. ರಾಜ್ಯದಲ್ಲಿಯೇ 25 ಸಾವಿರ ಮನೆಗಳನ್ನು ಬಡವರಿಗೆ ಕೊಡಿಸಿದ್ದೇನೆ. ಕುಂಚಾವರಂ ವಲಯದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ, ಪಂಗಡ ಜನರಿದ್ದಾರೆ. ಆದರೆ ಜನಗಣತಿಯಲ್ಲಿ ಜನಸಂಖ್ಯೆ ಕಡಿಮೆ ಇದೆ ಎನ್ನಲಾಗುತ್ತಿದೆ. ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು ಪ್ರಾರಂಭ

ಆಗಬೇಕಾಗಿದೆ. ಇಲ್ಲಿನ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಅವಕಾಶ ಕಲ್ಪಿಸಬೇಕು. ಅಲ್ಲದೇ ಬಡವರಿಗೆ ಸರ್ಕಾರದ ಸೌಲಭ್ಯ ದೊರೆಯಲು ಈಗಾಗಲೇ 25 ಸಾವಿರ ವಸತಿ ರಹಿತ ಮತ್ತು ನಿವೇಶನ ರಹಿತರು ಎಂದು ಸಮೀಕ್ಷೆ ಮಾಡಲಾಗಿದೆ. ಜಿಲ್ಲಾಧಿ ಕಾರಿಗಳು ಶಾದೀಪುರ, ವೆಂಕಟಾಪುರ, ಕುಂಚಾವರಂ, ಮಿರಿಯಾಣ ಗಡಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಹೇಳಿದರು.

ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಸುಜಾತಾ ರಮೇಶ ಸಂಕಟಿ, ಉಪಾಧ್ಯಕ್ಷೆ ಪುಷ್ಪಾ ವೆಂಕಟ, ಸಿಪಿಐ ಮಹಾಂತೇಶ ಪಾಟೀಲ, ತಾಪಂ ಅ ಧಿಕಾರಿ ಅನಿಲ ರಾಠೊಡ, ಪಿಡಿಒ ತುಕ್ಕಪ್ಪ ಇದ್ದರು. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು,  ವೆಂಕಟೇಶ ದುಗ್ಗನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next