Advertisement

ಮಧ್ಯ ಪ್ರದೇಶ ಬಿಜೆಪಿ ನಾಯಕನ ಹತ್ಯೆ: ಬಿಜೆಪಿ ಕಾರ್ಯಕರ್ತ ಅರೆಸ್ಟ್‌

10:01 AM Jan 19, 2019 | Team Udayavani |

ಪ್ರತಾಪಗಢ, ರಾಜಸ್ಥಾನ : ಮಧ್ಯ ಪ್ರದೇಶದ ಬಿಜೆಪಿ ನಾಯಕ ಪ್ರಹ್ಲಾದ ಬಂಧ್ವಾರ್‌ ಅವರ ಕೊಲೆ ಕೇಸಿಗೆ ಸಂಬಂಧಪಟ್ಟು ಪೊಲೀಸರು ಇಂದು ಶನಿವಾರ ಬೆಳಗ್ಗೆ ಮುಖ್ಯ ಆರೋಪಿ ಮನೀಶ್‌ ಬೈರಾಗಿ ಎಂಬಾತನನ್ನು ರಾಜಸ್ಥಾನದ ಪ್ರತಾಪಗಢ ದಲ್ಲಿ ಬಂಧಿಸಿದ್ದಾರೆ. ಬಂಧಿತ ಕೊಲೆ ಆರೋಪಿ ಬೈರಾಗಿ ಓರ್ವ ಬಿಜೆಪಿ ಕಾರ್ಯಕರ್ತನೇ ಆಗಿದ್ದಾನೆ. 

Advertisement

ಕಳೆದ ಗುರುವಾರ ಬಂಧ್ವಾರ್‌ ಅವರನ್ನು (ಇವರು ಮಾಂಡ್‌ಸೋರ್‌ ಮುನಿಸಿಪಲ್‌ ಕಾರ್ಪೊರೇಶನ್‌ ಅಧ್ಯಕ್ಷರು) ಮಾಂಡ್‌ಸೋರ್‌ನ ನಯೀ ಅಬಾದಿ ಯಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.

ಘಟನೆ ನಡೆದ ತತ್‌ಕ್ಷಣವೇ ಮಾಂಡ್‌ಸೋರ್‌ನಲ್ಲಿ ಕೇಸು ದಾಖಲಿಸಲಾಗಿತ್ತು. ಅದಾಗಿ ಕೆಲವೇ ತಾಸುಗಳಲ್ಲಿ  ಪೊಲೀಸರು ಬೈರಾಗಿಯೇ ಕೊಲೆಗಾರನೆಂದು ಕಂಡುಕೊಂಡಿದ್ದರು ಮತ್ತು ಆತನ ಬಂಧನಕ್ಕೆ ಪೊಲೀಸ್‌ ತಂಡವನ್ನು ರಚಿಸಲಾಗಿತ್ತು. 

ಬಂಧ್ವಾರ ಅವರನ್ನು ಬೈರಾಗಿ ಕೊಲ್ಲಲು ಕಾರಣವೇನೆಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲವಾದರೂ ಭೂವಿವಾದವೇ ಕೃತ್ಯಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next