Advertisement

ಅಮ್ಮನ ಅಂತ್ಯ ಸಂಸ್ಕಾರಕ್ಕೆ ಅಂಗಲಾಚಿದ 9 ವರ್ಷದ ಬಾಲಕ : ಮನಕಲುಕಿದ ಪುಟ್ಟ ಕಂದನ ಪರದಾಟ

06:59 PM Jul 24, 2021 | Team Udayavani |

ಸಿಂಧನೂರು : ಅನಾರೋಗ್ಯದಿಂದ ಮೃತಪಟ್ಟ ತಾಯಿಯ ಅಂತ್ಯ ಸಂಸ್ಕಾರ ಮಾಡಲು 9 ವರ್ಷದ ಬಾಲಕ ಪರದಾಡಿದ ಮನಕಲಕುವಂತಹ ಘಟನೆ ನಗರದಲ್ಲಿ ನಡೆದಿದೆ.

Advertisement

ಇಲ್ಲಿನ ೧೭ನೇ ವಾರ್ಡ್ನ ನಿವಾಸಿ ಸರಸ್ವತಿ (೩೨) ಮೃತ ಮಹಿಳೆ. ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎಂಟು ದಿನದ ಹಿಂದೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ದೇಹ ಶವಗಾರದಲ್ಲೇ ಉಳಿದಿತ್ತು. ಆದರೆ, ಮಗ ತನ್ನ ತಾಯಿಯ ಅಂತ್ಯಸಂಸ್ಕಾರ ಮಾಡಲು ಅವರಿವರನ್ನು ಅಂಗಲಾಚಿದ ದೃಶ್ಯ ನೋಡುಗರ ಮನಕಲುಕಿದೆ. ಕೊನೆಗೆ ಜೆಡಿಎಸ್ ಮುಖಂಡ ಬಸವರಾಜ್ ನಾಡಗೌಡ, ಅಭಿಷೇಕ ನಾಡಗೌಡ ಸೇರಿದಂತೆ ಇತರರು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next