Advertisement

ಕೇರಳ ಚುನಾವಣಾ ಅಖಾಡ: ಪಿಣರಾಯಿ ವಿರುದ್ಧ ವಾಳಯಾರ್‌ ಹೆಣ್ಮಕ್ಕಳ ತಾಯಿ ಸ್ಪರ್ಧೆ

07:06 PM Mar 16, 2021 | Team Udayavani |

ಕಾಸರಗೋಡು, ಮಾ.16: ತೃಶ್ಶೂರಿನ ವಾಳಯಾರ್‌ನಲ್ಲಿ ಲೈಂಗಿಕ ಕಿರುಕುಳದ ಬಳಿಕ ಕೊಲೆಯಾದ ಹೆಣ್ಮಕ್ಕಳ ತಾಯಿ ಧರ್ಮಡ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ತೃಶ್ಶೂರು ಪ್ರೆಸ್‌ ಕ್ಲಬ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

Advertisement

ತನ್ನ ಮಕ್ಕಳಿಗೆ ನ್ಯಾಯ ಲಭಿಸಲು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೆಣ್ಮಕ್ಕಳ ತಾಯಿ ಹೇಳಿದ್ದಾರೆ. ತನ್ನನ್ನು ಬೀದಿಗಿಳಿಸಿದ ಡಿವೈಎಸ್‌ಪಿ ಸೋಜನ್‌ ತನಗಿಂತ ಕೆಳಮಟ್ಟದಲ್ಲಿ ಒಂದು ದಿನ ತಲೆಯಲ್ಲಿ ಟೋಪಿಯಿಲ್ಲದೆ ಕಾಣಲು ಆಗ್ರಹಿಸುತ್ತಿದ್ದೇನೆ. ಸೋಜನ್‌ನಂತೆ ಹಲವಾರು ಪೊಲೀಸರು ಬಡ ಹೆಣ್ಮಕ್ಕಳ ಕೇಸುಗಳನ್ನು ವಸ್ತುನಿಷ್ಠವಾಗಿ ತನಿಖೆ ನಡೆಸಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ತೋರಿದ್ದು ಈ ಕಾರಣದಿಂದಲೇ ಎಂದಿದ್ದಾರೆ. ಇಂತಹ ಎಲ್ಲಾ ಕುಟುಂಬಗಳ ಪರವಾಗಿ  ಸ್ಪರ್ಧಿಸುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಹೋದರಿಯರು ಲೈಂಗಿಕ ಕಿರುಕುಳಕ್ಕೆ ತುತ್ತಾಗಿ ಕೊಲೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಬುಡಮೇಲುಗೊಳಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳದ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ ಈ ತಾಯಿ ಕೇಶಮುಂಡನ ಮಾಡಿಸಿಕೊಂಡಿದ್ದರು.  ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಜ.26 ರಿಂದ ಪಾಲ್ಗಾ ಟ್‌ನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next