Advertisement

ನೆಲ್ಲೂರು ಕೆಮ್ರಾಜೆ‌: ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಮೃತ್ಯು!

02:46 PM Aug 08, 2021 | Team Udayavani |

ಸುಳ್ಯ‌: ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿ ಮಗು ಮತ್ತು ತಾಯಿ ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ.

Advertisement

ಮಾಪಲಕಜೆಯ ಜನಾರ್ಧನ ನಾಯಕ್ ಅವರ ಪುತ್ರಿ ಸಂಗೀತ ಅವರ ಮಗು ಮನೆಯ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ತಾಯಿ ಸಂಗೀತ ಅವರು ಪ್ರಯತ್ನಿಸುವ ಸಂದರ್ಭ ಈಜು ಬಾರದ ಅವರು ಕೂಡಾ ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟರೆನ್ನಲಾಗಿದೆ.

ಇದನ್ನೂ ಓದಿ:ಕಾಲು ಜಾರಿ ಬಿದ್ದ ಹಿರಿಯ ನಟಿ ಲೀಲಾವತಿ : ಸೊಂಟ ಹಾಗೂ ಕಾಲಿಗೆ ಪೆಟ್ಟು

ತಾಯಿಯ ಮೃತದೇಹ ಕೆರೆಯಿಂದ ಹೊರತೆಗೆಯಲಾಗಿದ್ದು, ಮಗುವಿನ ದೇಹಕ್ಕಾಗಿ ಅಗ್ನಿಶಾಮಕ ದಳದವರು ಹುಡುಕಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next