Advertisement

ಕಾಂಗ್ರೆಸ್‌ನಲ್ಲಿ 20 ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ: ಬಿಎಸ್‌ವೈ ಬಾಂಬ್‌

09:10 AM May 11, 2019 | Vishnu Das |

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ 20 ಮಂದಿ ಅತೃಪ್ತ ಶಾಸಕರಿದ್ದಾರೆ. ಮೇ 23 ರ ವರೆಗೆ ಕಾದುನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಎಎನ್‌ಐನೊಂದಿಗೆ ಮಾತನಾಡಿದ ಅವರು , ಕಾಂಗ್ರೆಸ್‌ನಲ್ಲಿ 20 ಕ್ಕೂ ಹೆಚ್ಚುಶಾಸಕರು ಸರಕಾರದ ಬಗ್ಗೆ ಅತೃಪ್ತಿಹೊಂದಿದ್ದಾರೆ. ಅವರೆಲ್ಲಾ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಕಾದು ನೋಡೋಣ ಎಂದರು.

ಇದೇ ವೇಳೆ ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುತ್ತಾರೆ, ಆಗ ನಮ್ಮ ಸಂಖ್ಯಾ ಬಲ 106 ಆಗುತ್ತದೆ. ಪಕ್ಷೇತರರೂ ನಮಗೆ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುವ ಲಕ್ಷಣಗಳು ಕಂಡು ಬಂದಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next