Advertisement

ಮುರುಡೇಶ್ವರಕ್ಕೆ ಹೆಚ್ಚಿನ ಭದ್ರತೆ : ಗೃಹ ಸಚಿವರಿಗೆ ಭಟ್ಕಳ ಶಾಸಕರ ಮನವಿ

08:02 PM Nov 25, 2021 | Team Udayavani |

ಬೆಂಗಳೂರು:  ಇತಿಹಾಸ ಪ್ರಸಿದ್ದ ಮುರುಡೇಶ್ವರ ಕ್ಷೇತ್ರಕ್ಕೆ ಹೆಚ್ಚಿನ ಭದ್ರತೆ ನೀಡಬೇಕು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುರ್ಡೇಶ್ವರದ ದೇವಸ್ಥಾನದ ಆವರಣದಲ್ಲಿರುವ ಶಿವ ಪ್ರತಿಮೆ ದ್ವಂಸಗೊಳಿಸುವಂತೆ ವಾಯ್ಸ್ ಆಫ್ ಹಿಂದ್ ಎಂಬ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಪಡಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಭಟ್ಕಳ ಶಾಸಕ ಸುನಿಲ್ ನಾಯ್ಕರವರು ಗುರುವಾರ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

ಮನವಿ ಸ್ವೀಕರಿಸಿ ದ ಸಚಿವರು, ಮುರುಡೇಶ್ವರ ಕ್ಷೇತ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಗಂಭೀರ ಪ್ರಯತ್ನ ನಡೆಸಲಾಗಿದೆ, ಎಂದು ತಿಳಿಸಿದರು.

ಈಗಾಗಲೇ ಶಿವನ ವಿಗ್ರಹದ ಮೂಲ ಚಿತ್ರ ವಿಕಾರ ಮಾಡಿದವರನ್ನು ಗುರುತಿಸಲು ಸೈಬರ್ ಕ್ರೈಂ ವಿಭಾಗದೊಂದಿಗೆ ಸಮನ್ವಯ ಸಾಧಿಸಲು ಉತ್ತರ ಕನ್ನಡ ಎಸ್ಪಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next