Advertisement

ಕೋವಿಡ್ ಸೋಂಕಿತರಿಂದ ಹೆಚ್ಚು ಹಣ ವಸೂಲಿ

01:56 PM Oct 02, 2020 | Suhan S |

ಹಾಸನ: ಕೋವಿಡ್ ಪರಿಸ್ಥಿತಿಯನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚಿಸಿದರು. ನಗರದ ಕೆ.ಆರ್‌.ಪುರಂನಲ್ಲಿರುವ ಜನಪ್ರಿಯ ಆಸ್ಪತ್ರೆಯ 7ನೇ ವರ್ಷಾಚರಣೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಉಚಿತ ವಿಮಾ ಯೋಜನೆ ಹಸ್ತಾಂತರ ‌ ಮತ್ತು ಕೋವಿಡ್ ಸಹಾಯವಾಣಿ ಬಿಡುಗಡೆ ಮಾಡಿ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಂದ ಹೆಚ್ಚಿ® ‌ ಹಣ ಪಡೆಯುತ್ತಿರುವ ‌ ಬಗ್ಗೆ ದೂರು ಬರುತ್ತಿವೆ. ಈ ಸಂಕಷ್ಟದ ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.

Advertisement

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತವು ಕೆಲವು ಸೂಚನೆ ನೀಡಿದೆ. ಜಿಲ್ಲೆಯ 8 ಖಾಸಗಿ ಆಸ್ಪತ್ರೆಯಲ್ಲಿ 350 ಬೆಡ್‌ ಸೋಂಕಿತರಿಗೆ ಕಾಯ್ದಿರಿಸಲು  ಹಾಗೂ ತೀವ್ರ ನಿಗಾ ಘಟಕದ 25 ಬೆಡ್‌ ಗಳು ಲಭ್ಯವಿರುವಂತೆ ಸೂಚನೆ ನೀಡ ಲಾಗಿದೆ. ಈ ನಿಟ್ಟಿ ನಲ್ಲಿ ಸರ್ಕಾರದ ಜೊತೆ ಖಾಯಂ ಆ‌ಗಿ ಆಸ್ಪತ್ರೆಗಳು ಕೂಡ ಕೈಜೋಡಿಸಿವೆ ಎಂದರು.

ಜನಪ್ರಿಯ ಆಸ್ಪತ್ರೆಯ ಸಿಇಒ ಡಾ. ಅಬ್ದುಲ್‌ ಬಷೀರ್‌ ಮಾತನಾಡಿ, 25 ಆಶಾ ಕಾರ್ಯಕರ್ತರಿಗಾಗಿ 25 ಲಕ್ಷ.ರೂ ನ ವಿಮಾ ಯೋಜನೆ ಮಾಡಿಸಲಾಗಿದೆ ಎಂದರು.

ಎಸಿ ಡಾ. ನವೀನ್‌ ಭಟ್‌, ಡಿಎಚ್‌ಒ ಡಾ. ಸತೀಶ್‌ ಕುಆಮರ್‌, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾಧ್ಯಕ್ಷ ಎಚ್‌.ಪಿ. ಮೋಹನ್‌, ವೈದ್ಯರಾದ ಡಾ. ಹಾರೂನ್‌, ಡಾ. ಅನೂಪ್‌, ಡಾ. ಕಿರಣ್‌ಕುಮಾರ್‌, ಡಾ. ಚಂದನ್‌, ಡಾ. ಲಿಂಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next