Advertisement

ಹೆದ್ದಾರಿ ಹೊಂಡಗಳಿಗೆ ಕಾಂಕ್ರೀಟ್ ಹಾಕಿದ ಯುವ ಮೋರ್ಚಾ ಕಾರ್ಯಕರ್ತರು

12:39 AM Jul 21, 2020 | Hari Prasad |

ಬಂಟ್ವಾಳ: ಲಾಕ್ ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಯುವಕರು ಸೋಮವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಬಿ.ಸಿ.ರೋಡು ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಹೊಂಡಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚುವ ಕಾರ್ಯ ನಡೆಸಿದರು.

Advertisement

ಶ್ರಮದಾನ ನಿರತ ಕಾರ್ಯಕರ್ತರಿಗೆ ನಾಗ ಕ್ಯಾಂಟೀನ್ ಹರೀಶ್ ಹಾಗೂ ಗುರು ಅವರು ಪಾನೀಯ ಹಾಗೂ ತಿಂಡಿಯ ವ್ಯವಸ್ಥೆ ಕಲ್ಪಿಸಿದರು.

ದ.ಕ.ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಂಟ್ವಾಳ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಸೇರಿದಂತೆ ಕಾರ್ತಿಕ್ ಬಲ್ಲಾಳ್, ಮಚೇಂದ್ರ ಸಾಲ್ಯಾನ್, ಸುರೇಶ್ ಟೈಲರ್, ಲಕ್ಷಣ ರಾಜ್, ಪ್ರದೀಪ್ ಪುಟ್ಟ, ಶಶಿಧರ್ ,ಅಶ್ವಥ್ , ಮಿಥುನ್, ಸತೀಶ್, ಶೈಲೇಶ್, ಪ್ರಜ್ವಲ್, ಪ್ರತೀಶ್ ಪಾಲ್ಗೊಂಡಿದ್ದರು.


Advertisement
Advertisement

Udayavani is now on Telegram. Click here to join our channel and stay updated with the latest news.

Next