Advertisement

ಮೂಡುಬಿದಿರೆ: ಸಿಡಿಲಾಘಾತದಿಂದ ಇಬ್ಬರು ಸ್ಥಳದಲ್ಲೇ ಸಾವು; ಮೂವರು ಆಸ್ಪತ್ರೆಗೆ

07:35 PM Nov 01, 2021 | Team Udayavani |

ಮೂಡುಬಿದಿರೆ: ಸೋಮವಾರ ಸಂಜೆ ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸಿಡಿಲಾಘಾತದಿಂದ ಸ್ಥಳೀಯರೇ ಆದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

Advertisement

ಜತೆಗಿದ್ದ ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ 25-26ರ ಆಸುಪಾಸಿನ ವಯೋಮಾನದವರು.ಯಶವಂತ, ಮಣಿಪ್ರಸಾದ ಘಟನೆಯಲ್ಲಿ ಮೃತಪಟ್ಟವರು.

ಗಣೇಶ, ಸಂದೀಪ ಮತ್ತು ಪ್ರವೀಣ ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ನೋ ಕ್ವಾರಂಟೈನ್: ಕೋವಾಕ್ಸಿನ್ ಲಸಿಕೆಯನ್ನು ಅಂಗೀಕರಿಸಿದ ಆಸ್ಟ್ರೇಲಿಯಾ

ಸೋಮವಾರ ಅಪರಾಹ್ನ ಗಂ.3.30ರಿಂದ ಸುಮಾರು ಒಂದೂವರೆ ತಾಸು ಮೂಡುಬಿದಿರೆ ಪರಿಸರದಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next