Advertisement
ಭ| ಶಾಂತಿನಾಥ ಸ್ವಾಮಿ ಮೂಲ ನಾಯಕನಾಗಿರುವ, ಮೂಡುಬಿದಿರೆ ಜೈನ ಪೇಟೆಯಲ್ಲಿರುವ ಶ್ರೀ ಹಿರೇ ಅಮ್ಮನವರ ಬಸದಿಯಲ್ಲಿ ಫೆ. 10ರಿಂದ 16ರ ವರೆಗೆ ನಡೆದ ಧಾಮ ಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಸಮ್ಮಾನಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮಿಜಾರುಗುತ್ತು ಡಾ| ಮೋಹನ ಆಳ್ವ, ವಾಸ್ತು ತಜ್ಞ ಡಾ| ಪಾದೂರು ಸುದರ್ಶನ ಕುಮಾರ್, ಎಂಜಿನಿಯರ್ ಪಾರ್ಶ್ವನಾಥ ಜೈನ್, ಮಾಂಡೊವಿ ಉಪಾಧ್ಯಕ್ಷ ನೇರಂಕಿ ಪಾರ್ಶ್ವನಾಥ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ ಅವರನ್ನು ಸಮ್ಮಾನಿಸಲಾಯಿತು. ಡಾ| ಮೋಹನ ಆಳ್ವರು ಮಾತ ನಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಸಮ್ಮಾನಿತರನ್ನು ಅಭಿನಂದಿಸಿದರು. ಹೊಂಬುಜದ ಡಾ| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ರಥ ವಿಹಾರಕ್ಕೆ ಚಾಲನೆ ನೀಡಿದರು. ಭಾರತಿ ಬಿ. ಕಟ್ಟೆಮಾರ್, ಅನಂತ ಕೇಸರಿ ಕಟ್ಟೆಮಾರ್, ಕುಲದೀಪ ಅರಮನೆ, ಉಪಾಧ್ಯಕ್ಷ ಆನಡ್ಕ ಸುಧೀಶ್ ಕುಮಾರ್,
ರಾಜೇಂದ್ರ ಕುಮಾರ್ಮಯೂರಿ, ಕಾರ್ಯದರ್ಶಿಗಳಾದ ನಮಿರಾಜ್, ರಂಜಿತ್ ಕುಮಾರ್, ಸಂಪತ್ಕುಮಾರ್, ಮಿತ್ರಸೇನ ಇಂದ್ರ ಉಪಸ್ಥಿತರಿದ್ದರು. 50 ಲಕ್ಷ ರೂ. ಅನುದಾನ
ರಾಜ್ಯ ಸರಕಾರದಿಂದ 50 ಲಕ್ಷ ರೂ. ಅನುದಾನ ಒದಗಿಬಂದಿರುವುದನ್ನು ಸಭೆಯಲ್ಲಿ ಪ್ರಕಟಿಸಲಾಯಿತು. ಪ್ರ. ಕಾರ್ಯದರ್ಶಿ ರಾಜವರ್ಮ ಬೈಲಂಗಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪ್ರಭಾತ್ ಬಲಾ°ಡು ನಮಿರಾಜ ಜೈನ್, ನಿರಂಜನ ಅಳಿಯೂರು ನಿರೂಪಿಸಿದರು. ರಂಜಿತ್ ತಮನಂಗಡಿ ವಂದಿಸಿದರು.