Advertisement

Moodabidri: ಬಿರುಗಾಳಿಗೆ ಮನೆ, ಕಾರಿನ ಮೇಲೆ ಮರ ಬಿದ್ದು ಹಾನಿ

12:18 AM Jul 17, 2024 | Team Udayavani |

ಮೂಡುಬಿದಿರೆ: ಮಂಗಳವಾರ ಮುಂಜಾನೆ 3ರ ಸುಮಾರಿಗೆ ಬೀಸಿದ ಬಿರುಗಾಳಿಗೆ ಮೂಡುಬಿದಿರೆ ದೊಡ್ಮನೆ ರಸ್ತೆ ನಾಯಕ್‌ ಕಂಪೌಂಡ್‌ ಬಳಿ ಇದ್ದ ಭಾರೀ ಗಾತ್ರದ ಹುಣಿಸೆ ಮರ ಬುಡ ಸಮೇತ ಉರುಳಿ ಬಿದ್ದು ಮನೆ ಮತ್ತು ಕಾರಿಗೆ ಹಾನಿಯಾಗಿದೆ.

Advertisement

ಘಟನೆಯಲ್ಲಿ ಗಣೇಶ ನಾಯಕ್‌ ಅವರಿಗೆ ಸೇರಿದ, ಸರ್ವೋತ್ತಮ ಆಚಾರ್ಯ ಅವರು ವಾಸವಾಗಿರುವ ಬಾಡಿಗೆ ಮನೆಯ ಒಂದು ಭಾಗ, ಆವರಣ ಗೋಡೆ ಮತ್ತು ಹತ್ತಿರವೇ ನಿಲ್ಲಿಸಿದ್ದ ಕಾರಿನ ಎದುರಿನ ಗಾಜು ಸಂಪೂರ್ಣ ಪುಡಿಯಾಗಿದೆ.

ಘಟನೆಯಲ್ಲಿ ಕಾರಿನ ಹತ್ತಿರ ಇದ್ದ ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದೆ. ಆ ಸಂದರ್ಭ ವಿದ್ಯುತ್‌ ಪೂರೈಕೆ ಇಲ್ಲದೇ ಇದ್ದಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮಾಹಿತಿ ಪಡೆದ ಪುರಸಭೆಯವರು ಮರವನ್ನು ತೆರವುಗೊಳಿಸಿದ್ದಾರೆ ಮತ್ತು ಮೆಸ್ಕಾಂ ಸಿಬಂದಿ ಕಂಬ ಬದಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next