Advertisement

Rain ಕರಾವಳಿಯಲ್ಲಿ ಹಿಂಗಾರು ಬಿರುಸು ಸಾಧ್ಯತೆ: ನಿರೀಕ್ಷೆ ಹುಸಿಗೊಳಿಸಿದ ಮುಂಗಾರು

10:40 PM Oct 14, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಈ ಬಾರಿಯ ಮುಂಗಾರು ನಿರೀಕ್ಷೆ ಹುಸಿಗೊಳಿಸಿ ನಿರ್ಗಮಿಸಿದೆ. ಇದೀಗ ಹಿಂಗಾರು ಪ್ರವೇಶ ಪಡೆದುಕೊಳ್ಳುತ್ತಿದ್ದು, ಬಿರುಸಿನ ವಾಡಿಕೆ ಮಳೆ ನಿರೀಕ್ಷಿಸಲಾಗಿದೆ.

Advertisement

ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 19ರಷ್ಟು ಕಡಿಮೆ ಮಳೆ ಸುರಿದಿತ್ತು. ಇದೀಗ ಹಿಂಗಾರು ಕೆಲವೆಡೆ ಆರಂಭದಲ್ಲಿಯೇ ಬಿರುಸು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದರೆ, ಹಿಂಗಾರು ವೇಳೆ ವಾಡಿಕೆಯಂತೆ ಅಥವಾ ವಾಡಿಕೆಗಿಂತ ಅಧಿಕ ಮಳೆ ಸುರಿಯುತ್ತದೆ. ಕಳೆದ ಬಾರಿ ಕರಾವಳಿಯಲ್ಲಿ ಮುಂಗಾರು ವಾಡಿಕೆಯ ಮಳೆ ಸುರಿದ ಪರಿಣಾಮ ಹಿಂಗಾರು ವಾಡಿಕೆಗಿಂತ ಶೇ.14ರಷ್ಟು ಕ್ಷೀಣಿಸಿತ್ತು. ಆದರೆ, ಈ ಬಾರಿ ಮಳೆ ಕೊರತೆಯ ಪರಿಣಾಮ ಹಿಂಗಾರು ಅವಧಿಯಲ್ಲಿ ಯಥೇತ್ಛ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮುಂಗಾರು ಕೊನೆಗೊಂಡು ಹಿಂಗಾರು ಆರಂಭದ ಕಾಲ. ಅಕ್ಟೋಬರ್‌ ಎರಡನೇ ವಾರದಿಂದಲೇ ಈ ಬೆಳವಣಿಗೆ ನಡೆಯುತ್ತದೆ. ಈ ಅವಧಿಯಲ್ಲಿ ಬಂಗಾಲಕೊಲ್ಲಿ ಕಡೆಯಿಂದ ಹಿಂಗಾರು ಮಾರುñ ‌ ಗಳು ಆಗಮಿಸುತ್ತವೆ. ಮುಂಗಾರು ಅವಧಿಯಲ್ಲಿ ಮಳೆ ಸರಾಸರಿ ಗಿಂತ ಕಡಿಮೆ ಬಂದಾಗ ವಾತಾವರಣ ದಲ್ಲಿ, ಭೂಮಿಯಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಆಗ ಉಷ್ಣಾಂಶ ತನ್ನಿಂತಾನೇ ಏರಿಕೆಯಾಗುತ್ತದೆ. ಆ ವೇಳೆ ವಾತಾವರಣದಲ್ಲಿ ಒತ್ತಡ ಕಡಿಮೆ ಯಾಗುತ್ತದೆ. ಆಗ ಸುತ್ತಲಿನ ಮೋಡ ಚಲನೆಯಿಂದಾಗಿ ಮಳೆಯಾ ಗುತ್ತದೆ. ಇದೇ ಕಾರಣಕ್ಕೆ ಮುಂಗಾರು ಕಡಿಮೆಯಾದ ವರ್ಷಗಳಲ್ಲಿ ಹಿಂಗಾರು ಜಾಸ್ತಿ ಇರುತ್ತದೆ.

ದ.ಕ.ದಲ್ಲಿ ಮುನ್ನಡೆ, ಉಡುಪಿಯಲ್ಲಿ ಹಿನ್ನಡೆ
ಹಿಂಗಾರು ಆರಂಭದಲ್ಲಿ ತುಸು ಹಿನ್ನಡೆ ಕಂಡರೂ ಸದ್ಯ ಉತ್ತಮ ಮಳೆ ಆರಂಭಗೊಂಡಿದೆ. ಅ.1ರಿಂದ 13ರ ವರೆಗೆ ದ.ಕ. ಜಿಲ್ಲೆಯಲ್ಲಿ ಶೇ.31ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಉಡುಪಿಯಲ್ಲಿ ಶೇ. 37 ಕಡಿಮೆ ಮಳೆಯಾಗಿದೆ. ಆದರೆ, ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿರುಸಿನ ಮಳೆ ನಿರೀಕ್ಷೆ ಇದೆ.

Advertisement

ಈ ಬಾರಿ ಚಳಿ ಅವಧಿ ಹೆಚ್ಚಳ
ಕರಾವಳಿ ಭಾಗದಲ್ಲಿ ಸದ್ಯ ಬಿಸಿಲು, ಸೆಕೆ, ಮಳೆ ಇದ್ದು, ಕೆಲವು ಕಡೆ ಬೆಳಗ್ಗಿನ ಜಾವ ತುಸು ಚಳಿಯ ವಾತಾವರಣವೂ ಇದೆ. ಸದ್ಯದ ಮಾಹಿತಿಯ ಪ್ರಕಾರ ನವೆಂಬರ್‌ ಎರಡನೇ ವಾರದಿಂದ ಚಳಿ ಆರಂಭವಾಗಬಹುದು. ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಬಂದರೆ ಚಳಿ ಅವಧಿ ಮತ್ತು ಪ್ರಮಾಣ ಸಾಮಾನ್ಯವಾಗಿರುತ್ತಿತ್ತು. ಆದರೆ, ಹಿಂಗಾರು ಜಾಸ್ತಿಯಾದರೆ ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಕಾರಣ ಚಳಿ ಬೇಗ ಆರಂಭವಾಗಿ, ಚಳಿಯ ಅವಧಿ ಕೂಡ ಜಾಸ್ತಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿದಿತ್ತು. ಇದೇ ಕಾರಣಕ್ಕೆ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಮುಂಗಾರು ಕಡಿಮೆ ಸುರಿದ ವೇಳೆ ಹಿಂಗಾರು ಯಥೇತ್ಛವಾಗಿತ್ತು. ಹಿಂಗಾರು ಉತ್ತಮವಿದ್ದರೆ ಚಳಿಗಾಲದಲ್ಲಿಯೂ ವ್ಯತ್ಯಾಸವಾಗುವ ಸಾಧ್ಯತೆ ಇದೆ.
– ಡಾ| ರಾಜೇಗೌಡ, ಕೃಷಿ ವಿ.ವಿ. ಬೆಂಗಳೂರು ಹವಾಮಾನ ವಿಜ್ಞಾನಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next