Advertisement

Kanakpur: ಬ್ಯಾಂಕಿನಲ್ಲಿ ಡ್ರಾ ಮಾಡಿದ 2 ಲಕ್ಷ ರೂ. ಹಾಡಹಗಲೇ ಎಗರಿಸಿ ನಾಲ್ವರು ಪರಾರಿ

10:34 AM Mar 04, 2024 | Team Udayavani |

ಕನಕಪುರ: ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬಂದು ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇರಿಸಿದ್ದ 2 ಲಕ್ಷ ಹಣವನ್ನು ಹಾಡ ಹಗಲೇ ನಾಲ್ವರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮದ ವೆಂಕಟೇಶ್‌ ಹಣ ಕಳೆದುಕೊಂಡವರು. ಇವರು ತಮ್ಮ ಮಗಳ ಮದುವೆಗಾಗಿ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬಂದಿದ ಹಣವನ್ನು ನಾಲ್ವರು ಖದೀಮರು ಎಗರಿಸಿದ್ದಾರೆ.

ಹಣ ಕಳೆದುಕೊಂಡ ವೆಂಕಟೇಶ್‌ ಶನಿವಾರ ಮಧ್ಯಾಹ್ನ ಬೂದಿಕೆರೆ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್‌ ನಲ್ಲಿ 2 ಲಕ್ಷ ಹಣ ಡ್ರಾ ಮಾಡಿಕೊಂಡು ಆಕ್ಟಿವಾ ಹೋಂಡ ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡು ನಗರದ ಎಮ್‌ಎಚ್‌ಎಸ್‌ ರಸ್ತೆಯಲ್ಲಿರುವ ಬಿಡಿಸಿಸಿ ಬ್ಯಾಂಕ್‌ಗೆ ಹೊರಟ್ಟಿದ್ದರು. ಇದೆಲ್ಲ ಅಲ್ಲೆ ಇದ್ದು ಹೊಂಚುಹಾಕುತ್ತಿದ ನಾಲ್ವರು ಖದೀಮರು ಎರಡು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಿಡಿಸಿಸಿ ಬ್ಯಾಂಕ್‌ ವರೆಗೂ ಬಂದಿದ್ದಾರೆ. ವೆಂಕಟೇಶ್‌ ಅವರು ಬ್ಯಾಂಕ್‌ ಕೆಳಗಡೆ ವಾಹನ ನಿಲ್ಲಿಸಿ ಮೊದಲ ಮಹಡಿಯಲ್ಲಿರುವ ಬ್ಯಾಂಕ್‌ಗೆ ಹೋಗಿದ್ದರು. ತಮ್ಮ ಕೆಲಸ ಮುಗಿಸಿ 5 ನಿಮಿಸದಲ್ಲಿ ವಾಪಸ್‌ ಬಂದು ನೋಡುವುದರೊಳಗೆ ಡಿಕ್ಕಿಯಲ್ಲಿದ್ದ ಹಣವನ್ನು ಎಗರಿಸಿ ಸ್ಥಳದಿಂದ ನಾಲ್ವರು ಖದೀಮರು ಕಾಲ್ಕಿತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಬಿಡಿಸಿಸಿ ಬ್ಯಾಂಕ್‌ ಸಿಸಿಟೀವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ವೆಂಕಟೇಶ್‌ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಮಹಜರು ನಡೆಸಿ ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next