Advertisement

ನಮ್ಮ ಹೋರಾಟದಿಂದ ಮೇಕೆದಾಟುವಿಗೆ ಹಣ ಬಿಡುಗಡೆಯಾಗಿದೆ: ಹರಿ ಪ್ರಸಾದ್

04:32 PM Mar 04, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಹೋರಾಟ ಮಾಡಿದ ಫಲವಾಗಿ ಮೇಕೆದಾಟು ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಬಜೆಟ್ ಕುರಿತು ಪರಿಷತ್ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮುಂದಿನ ಚುನಾವಣಾ ದೃಷ್ಟಿಯಲ್ಲಿ ಸಿಎಂ ಬೊಮ್ಮಯಿ ಚೊಚ್ಚಲ ಬಜೆಟ್ ಮಂಡನೆ ಮಾಡಿ, ಎಲ್ಲರನ್ನೂ ಸಂತೃಪ್ತ ಪಡಿಸಲು ಮುಂದಾಗಿದ್ದಾರೆ. ಬಿಜೆಪಿ ಚುನಾವಣೆ ಪ್ರಣಾಳಿಕೆ ತರ ಈ ಬಜೆಟ್ ಇದ್ದು, ದುರ್ಬಲ ವರ್ಗದವರಿಗೆ ಅನ್ಯಾಯವಾಗಿದೆ.

ಹಿಂದೆ ಬೆಂಗಳೂರು ಅಭಿವೃದ್ಧಿ ಆರು ಸಾವಿರ ಕೋಟಿ ಘೋಷಣೆ ಮಾಡಿದರು. ಅದನೇ ತಂದು ಬಜೆಟ್ ಓದಿದ್ದಾರೆ ಅಷ್ಟೇ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಪ್ರಮುಖ ಯೋಜನೆಗಳು ನೀಡಿಲ್ಲ. ಖಾಸಗೀಕರಣ ಮಾಡಲು ಮುಂದಾಗಿದ್ದಾರೆ ಎಂದರು.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ್ದ ಸರ್ಕಾರ ಇಂದು ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಒಂದು ಸಾವಿರ ಘೋಷಣೆ ಮಾಡಿದ್ದಾರೆ . ಆ ಮೂಲಕ ಯೋಜನೆ ಅವಶ್ಯಕತೆ ಬಗ್ಗೆ ಗೊತ್ತಾಗಿದೆ. ಹಣ ಬಿಡುಗಡೆ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next