Advertisement

ಗುರುದ್ವಾರ ಸಿಸ್ ಗಂಜ್ ಸಾಹಿಬ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

10:42 AM May 01, 2021 | Team Udayavani |

ಹೊಸದಿಲ್ಲಿ: ಗುರು ತೇಜ್​ ಬಹದ್ದೂರ್​ ಅವರು 400 ನೇ ಜಯಂತಿಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರ ದೆಹಲಿಯ ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿದರು.

Advertisement

400ನೇ ಪ್ರಕಾಶ್​ ಪುರಬ್​ ದಿನದಂದು ನಾನು ಶ್ರೀ ಗುರು ತೇಜ್​ ಬಹದ್ದೂರ್ ಅವರಿ​ಗೆ ತಲೆ ಬಾಗುತ್ತೇನೆ. ಅವರ ಧೈರ್ಯ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ಗುಣಗಳಿಂದಾಗಿ ಜಾಗತಿಕವಾಗಿ ಅವರನ್ನು ಗೌರವಿಸಲಾಗುತ್ತದೆ. ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ತಲೆಬಾಗಲು ಅವರು ನಿರಾಕರಿಸಿದ್ದರು ಮತ್ತು ಅವರ ಸರ್ವೋಚ್ಚ ತ್ಯಾಗ ಅನೇಕರಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸ್ಮರಿಸಿದ್ದಾರೆ.

ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಭದ್ರತೆಯಿಲ್ಲದೆ ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿದರು. ಪ್ರಧಾನಿಯವರ ವಿಶೇಷ ಭದ್ರತೆಯನ್ನು ಇಂದಿನ ಭೇಟಿಯ ವೇಳೆ ನಿಯೋಜಿಸಲಾಗಿರಲಿಲ್ಲ. ಜನರ ನಡುವೆ ಪ್ರಧಾನಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next