Advertisement

ಮೋದಿ ಅವಹೇಳನ: ದೂರು ದಾಖಲು

11:25 PM May 11, 2019 | Lakshmi GovindaRaj |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್‌ ಮಾಡಿದ ಬೆಂಗಳೂರಿನ ಶ್ರೀವತ್ಸ ವೈ.ಬಿ.ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಪ್ರಶಾಂತ ಜಾಧವ ಶನಿವಾರ ದೂರು ದಾಖಲಿಸಿದ್ದಾರೆ.

Advertisement

ಶ್ರೀವತ್ಸ ವೈ.ಬಿ.ಅವರು ಟ್ವಿಟರ್‌ನಲ್ಲಿ ಉದ್ದೇಶ ಪೂರ್ವಕವಾಗಿ ಪ್ರಧಾನಿ ಮೋದಿ ಅವರ ಘನತೆಗೆ ಕುಂದುಂಟು ಮಾಡುವ ಸಂದೇಶ ಹಂಚಿಕೊಂಡಿದ್ದಾರೆ. ಮೋದಿ ಸುಳ್ಳಿಲ್ಲದೆ ಒಂದು ವಾಕ್ಯವನ್ನೂ ಮಾತನಾಡುವುದಿಲ್ಲ.

ಮೇ 23ರಂದು ಈ ಸುಳ್ಳುಗಾರನನ್ನು ಜನರು ಮನೆಗೆ ಕಳಿಸಲಿದ್ದಾರೆ ಎಂದು ಬರೆದಿದ್ದಲ್ಲದೆ, ಮೋದಿ ಅವರ ಭಾವಚಿತ್ರವನ್ನು ಹಿಟ್ಲರ್‌ ರೀತಿ ಚಿತ್ರಿಸಿ, “ಹಿಟ್ಲರ್‌ ಕಾ ಬೇಟಾ ಝೂಟ್ಲರ್‌’ ಎಂದು ಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ. ಶ್ರೀವತ್ಸ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next