Advertisement
ಅಮಿತ್ ಷಾ ಹಾಗೂ ನರೇಂದ್ರ ಮೋದಿ ಅವರ ಆಗಮನದಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅವರ ಪ್ರಚಾರಕ್ಕೆ ರಾಜ್ಯದ ಜನರು ಸಹ ಮರಳಾಗುವುದಿಲ್ಲ. ಅಲ್ಲದೆ ರಾಜ್ಯದ ಜನರಿಗೆ ನಮ್ಮ ಸರ್ಕಾರದ ಆಡಳಿತ ಬಗ್ಗೆ ಸಮಾಧಾನವಿದೆ. ಜನರ ಒಲವು ಕಾಂಗ್ರೆಸ್ ಪಕ್ಷದ ಪರವಿದೆ. ಅಲ್ಲದೆ ಮುಂದೆಯೂ ನಮೊಂದಿಗಿರುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಆಗಮನದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Related Articles
Advertisement
ಕೆಎಸ್ಒಯು ಮಾನ್ಯತೆ ಬಗ್ಗೆ ಮಾತನಾಡಿ, ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅಲ್ಲದೆ ದೆಹಲಿಗೆ ತೆರಳಿ ಜವಡೇಕರ್ ಅವರನ್ನು ಖುದ್ದು ಬೇಟಿ ಮಾಡುವುದಾಗಿ ತಿಳಿಸಿದರು. ಅಲ್ಲದೆ ಮಾಜಿ ಶಾಸಕ ಚಿಕ್ಕಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂಧರ್ಭದಲ್ಲಿ ಆಯಾರಾಂ ಗಯಾರಾಂ ಇದ್ದದ್ದೆ, ಹೀಗಾಗಿ ರಾಜಕಾರಣಿಗಳು ಪಕ್ಷದಿಂದ ಪಕ್ಷ ಬದಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಇದರ ಬದಲಿಗೆ ಮತದಾರರು ಒಂದು ಪಕ್ಷದ ಪರ ಬರಬೇಕು ಎಂದು ಹೇಳಿದರು.
ಪಕ್ಷ ತ್ಯಜಿಸಿದವರ ಪರಿಸ್ಥಿತಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಿಮಿಕ್ ಮೇಲೆ ಆಡಳಿತ ನಡೆಸುತ್ತಿದ್ದು, ಹೀಗಾಗಿ ಜನರನ್ನು ಹೆಚ್ಚು ದಿನ ಭಾವನಾತ್ಮಕ ಅಂಶಗಳ ಮೇಲೆ ಹಿಡಿದಿಡಲು ಸಾಧ್ಯವಿಲ್ಲ. ಮೋದಿ ಅವರು ಎಷ್ಟೇ ಮನ್ ಕಿ ಬಾತ್ ಹೇಳಿಕೊಂಡಿದ್ದರೂ ಏನೂ ಆಗುವುದಿಲ್ಲ.
ಅಲ್ಲದೆ ಮೋದಿ ಆಡಳಿತ ಬಗ್ಗೆ ಬಿಜೆಪಿ ಮುಖಂಡರೇ ಮಾತನಾಡುತ್ತಿದ್ದು, ಸುಬ್ರಹ್ಮಣ್ಯಯಸ್ವಾಮಿ, ಸಿನ್ಹಾ, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಬಿಜೆಪಿಗೆ ಹೋದ ಮೇಲೆ ಎಸ್.ಎಂ.ಕೃಷ್ಣ ಅವರಿಗೆ ಅಲ್ಲಿನ ಪರಿಸ್ಥಿತಿಯೇನು ಎಂಬುದು ಅರ್ಥವಾಗುತ್ತಿದ್ದು, ಹೊರಗಿದ್ದಾಗ ಅರ್ಥವಾಗಿರಲಿಲ್ಲ ಎಂದು ಮೋದಿ ಬಗೆಗಿನ ಎಸ್.ಎಂ.ಕೃಷ್ಣ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.