Advertisement

ಮೋದಿ,ಶಾ ಕುತಂತ್ರ ಇಲ್ಲಿ ನಡೆಯುವುದಿಲ್ಲ : ರಾಮಲಿಂಗಾ ರೆಡ್ಡಿ 

10:39 AM May 19, 2018 | Team Udayavani |

ಬೆಂಗಳೂರು: ‘ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗುವುದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಕುತಂತ್ರ ಇಲ್ಲಿ ನಡೆಯುವುದಿಲ್ಲ’ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ‘ನಮ್ಮ ಎಲ್ಲಾ  ಶಾಸಕರು ಒಟ್ಟಿಗೆ ಇದ್ದೇವೆ ಇಬ್ಬರು ಮಾತ್ರ ಭೌತಿಕವಾಗಿ ಇರಲಿಲ್ಲ. ಅವರೂ ಕೂಡ ಇಂದು ನಮ್ಮನ್ನು ಬಂದು ಸೇರುತ್ತಾರೆ. ಯಾರೂ ಪಕ್ಷ ಕ್ಕೆ ದ್ರೋಹ ಮಾಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 

‘ಬಿಜೆಪಿ ಸಮರ್ಥಕರ ಸಂಖ್ಯೆ 104 ದಾಟುವುದಿಲ್ಲ. ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕಾಗುತ್ತದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬರುವುದು’ ಖಚಿತ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next