Advertisement

ಪ್ರಧಾನಿ ಮೋದಿ, ಅಮಿತ್‌ ಶಾ ಗ್ಯಾಂಗ್‌ಸ್ಟರ್‌ಗಳು : ಬಬ್ಬರ್‌ ವಿವಾದ

03:23 PM Nov 30, 2018 | Team Udayavani |

ಉದಯಪುರ : ‘ಪ್ರಧಾನಿ ನರೇಂದ್ರ ಮೋದಿ ಮತ್ತು  ಅಮಿತ್‌ ಶಾ ಗ್ಯಾಂಗ್‌ಸ್ಟರ್‌ಗಳು; ಇವರು ನಡೆಸುತ್ತಿರುವ ಗ್ಯಾಂಗ್‌ ಬಡ ಜನರನ್ನು ಕೊಲ್ಲುವ ಉದ್ದೇಶ ಹೊಂದಿದೆ’ ಎಂದು ರಾಜಸ್ಥಾನದ ಉದಯಪುರದಲ್ಲಿ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್‌ ನಾಯಕ ರಾಜ್‌ ಬಬ್ಬರ್‌ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. 

Advertisement

‘ಗುಜರಾತ್‌ನ ಇಬ್ಬರು ಗ್ಯಾಂಗ್‌ಸ್ಟರ್‌ ಗಳಿದ್ದಾರೆ. ಇವರಲ್ಲಿ ಒಬ್ಟಾತ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದಾರೆ; ಇವರು ನಡೆಸುತ್ತಿರುವ ಗ್ಯಾಂಗ್‌ ಬಡಜನರನ್ನು ಕೊಲ್ಲುವುದರಲ್ಲಿ ನಿರತವಾಗಿದೆ’ ಎಂದು ರಾಜ್‌ ಬಬ್ಬರ್‌ ಹೇಳಿದರು. 

ಕಳೆದ ನ.23ರಂದು ರಾಜ್‌ ಬಬ್ಬರ್‌ ಅವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ‘ರೂಪಾಯಿ ದರ ಎಷ್ಟು ಕುಸಿಯತ್ತಿದೆ ಎಂದರೆ ಅದರ ಮೌಲ್ಯವು ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್‌ ಅವರ ವಯಸ್ಸಿನ ಸಂಖ್ಯೆಯತ್ತ ಹೋಗುತ್ತಿದೆ’ ಎಂದು ಟೀಕಿಸಿದ್ದರು. 

ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥರಾಗಿರುವ ರಾಜ್‌ ಬಬ್ಬರ್‌, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳ ಫ‌ಲವನ್ನು ಟೀಕಿಸುವಾಗ ಅನಗತ್ಯವಾಗಿ ಮೋದಿ ತಾಯಿಯನ್ನು ಉಲ್ಲೇಖೀಸಿ ವಿವಾದ ಸೃಷ್ಟಿಸಿದ್ದರು. 

ರಾಜಸ್ಥಾನದಲ್ಲಿ ಡಿ.7ರಂದು ಚುನಾವಣೆ ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆದು ಫ‌ಲಿತಾಂಶ ಹೊರಬರಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next